ದೇಶದಲ್ಲಿ ಒಂದು ನೀತಿ ಇದ್ದರೆ, ರಾಜ್ಯದಲ್ಲಿ ಮತ್ತೊಂದು ನೀತಿ : ವಾಟಾಳ್ ನಾಗರಾಜ್ ಕಿಡಿ ಮೈಸೂರು,ಫೆಬ್ರವರಿ,03,2021(..):ಮುಖ್ಯಮಂತ್ರಿಗಳಿಗೆ ಯಾರು ಮಾಹಿತಿ ನೀಡ್ತಾರೋ ಗೊತ್ತಿಲ್ಲ. ದೇಶದಲ್ಲಿ ಒಂದು ನೀತಿ ಇದ್ದರೆ, ರಾಜ್ಯದಲ್ಲಿ ಮತ್ತೊಂದು ನೀತಿ ಇರುತ್ತೆ. ರಾಜ್ಯದಲ್ಲಿ‌ 100ರಷ್ಟು ಥಿಯೇಟರ್ ಭರ್ತಿಗೆ ಅವಕಾಶ ನೀಡಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ಕೇವಲ 50ರಷ್ಟು ಮಾತ್ರ ಚಿತ್ರಮಂದಿರ ಭರ್ತಿ ನೀತಿಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, 100ರಷ್ಟು ಥಿಯೇಟರ್ ಭರ್ತಿಗೆ ಅವಕಾಶ ನೀಡಬೇಕು. ಇಲ್ಲವಾದರೆ, ಉಗ್ರ ಹೋರಾಟ ನಡೆಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದ 50ರಷ್ಟು ಮಾತ್ರ ಚಿತ್ರಮಂದಿರ ಭರ್ತಿ ನೀತಿಗೆ ಆಕ್ರೋಶ ವ್ಯಕ್ತಪಡಿಸಿದ ಶೀಘ್ರವೇ ಚಿತ್ರಮಂದಿರ 100ರಷ್ಟು ಭರ್ತಿಗೆ ರಾಜ್ಯ ಸರ್ಕಾರ ಅವಕಾಶ ನೀಡಬೇಕು. ಇಲ್ಲದಿದ್ರೆ, ಹೋರಾಟ ನಡೆಸಬೇಕಾಗುತ್ತೆ’ ಎಂದು ಎಚ್ಚರಿಕೆ ನೀಡಿದರು. : - ----