ಸಚಿವನಾಗುವ ಹೆಚ್.ವಿಶ್ವನಾಥ್ ಕನಸಿಗೆ ತಣ್ಣೀರು: ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂಕೋರ್ಟ್…. ನವದೆಹಲಿ,ಜನವರಿ,28,2021(..):ಸಚಿವನಾಗಬೇಕೆಂಬ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕನಸಿಗೆ ಇದೀಗ ಸುಪ್ರೀಂಕೋರ್ಟ್ ತಣ್ಣೀರೆರಚಿದೆ. ಹೌದು, ಹೆಚ್.ವಿಶ್ವನಾಥ್ ಮಂತ್ರಿಯಾಗುವಂತಿಲ್ಲ ಎಂದು ಹೇಳಿದ್ದು ಈ ಮೂಲಕ ಹೈಕೋರ್ಟ್ ಆದೇಶವನ್ನ ಎತ್ತಿ ಹಿಡಿದಿದೆ. ವಿಧಾನಸಭೆ ಉಪಚುನಾವಣೆಯಲ್ಲಿ ಸೋತು ಪರಿಷತ್ ಸದಸ್ಯರಾಗಿದ್ದ ಹೆಚ್ ವಿಶ್ವನಾಥ್ ಅವರಿಗೆ ಪರಿಷತ್ ಸ್ಥಾನದ ಮೂಲಕ ರಾಜ್ಯ ಸರ್ಕಾರ ಸಚಿವ ಸ್ಥಾನ ನೀಡಲು ಮುಂದಾಗಿತ್ತು. ಆದರೆ ಇಂತಹ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ಹೆಚ್ ವಿಶ್ವನಾಥ್ ಅವರು ನಾಮನಿರ್ದೇಶನಗೊಂಡು ಸದಸ್ಯರಾಗಿರುವವರು. ಅವರು ಜನರಿಂದ ಆಯ್ಕೆಯಾಗಿಲ್ಲ. ಹೀಗಾಗಿ ಮಂತ್ರಿಯಾಗಲು ಅರ್ಹರಲ್ಲ ಎಂದು ಆದೇಶ ನೀಡಿತ್ತು. ಹೈಕೋರ್ಟ್ ಆದೇಶವನ್ನ ಪ್ರಶ್ನಿಸಿ ಹೆಚ್.ವಿಶ್ವನಾಥ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದು, ವಿಶ್ವನಾಥ್ ಮಂತ್ರಿಯಾಗುವಂತಿಲ್ಲ ಎಂದು ಹೇಳಿ ಹೆಚ್ ವಿಶ್ವನಾಥ್ ಸಲ್ಲಿಸಿದ್ಧ ಅರ್ಜಿಯನ್ನು ವಜಾಗೊಳಿಸಿದೆ. … . ’ : , . 28, 2021 (..): . ’ ’ , ’ .. . . . , .. ’ . .: / / . : -. - - - – -