ಟ್ರ್ಯಾಕ್ಟರ್‌ ಪರೇಡ್‌ ತಡೆದರೆ ರಸ್ತೆ ಸಂಚಾರ ಸಂಪೂರ್ಣ ಬಂದ್ : ಎಚ್ಚರಿಕೆ ನೀಡಿದ ರೈತರು. ಮೈಸೂರು, ಜ.25, 2021 : (.. ) : ನಾಳೆ ಬೆಂಗಳೂರಿನಲ್ಲಿ ನಡೆಯುವ ಟ್ರ್ಯಾಕ್ಟರ್‌ ಪರೇಡ್‌ನಲ್ಲಿ ಮೈಸೂರಿಂದ 200ಕ್ಕೂ ಹೆಚ್ಚು ಟ್ರ್ಯಾಕ್ಟರ್ ಬೆಂಗಳೂರಿಗೆ ತೆರಳಲಿವೆ. ಇದನ್ನು ತಡೆಯಲು ಯತ್ನಿಸಿದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ ಎಂದು ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ. ಸೋಮವಾರ ಮಾಧ್ಯಮದ ಜತೆ ಮಾತನಾಡಿದ ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ ಅವರು ಹೇಳಿದ್ದಿಷ್ಟು…ರೈತ ಸಮುದಾಯಕ್ಕೆ ಮಾರಕಾದ ಕೃಷಿ ನೀತಿ ಕೈಬಿಡುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ಮಂಗಳವಾರ ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್ ಆಯೋಜಿಸಲಾಗಿದೆ. ರೈತರು ಬೆಂಗಳೂರು ಪ್ರವೇಶಿಸದಂತೆ ತಡೆದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ ಎಂದು ಬಡಗಲಪುರ ನಾಗೇಂದ್ರ ಎಚ್ಚರಿಸಿದರು. ಬೆಂಗಳೂರಿನಲ್ಲಿ ನಡೆಯುವ ರೈತರ ಪರೇಡ್‌ನಲ್ಲಿ ಭಾಗವಹಿಸಲು ರಾಜ್ಯದ ನಾಲ್ಕು ಭಾಗಗಳಿಂದ ರೈತರು ತಮ್ಮ ವಾಹನಗಳಲ್ಲಿ ಬಂದು ಸೇರಲಿದ್ದಾರೆ. ಈ ಮಧ್ಯೆ ಸರ್ಕಾರ ಪೋಲಿಸರನ್ನು ಬಳಸಿಕೊಂಡು ಪರೇಡ್ ವಿಫಲಗೊಳಿಸಲು ಹುನ್ನಾರ ನಡೆಸಿದರೆ ವಿಕೋಪಕ್ಕೆ ತೆರಳುವುದು ಖಚಿತ. ಪ್ರತಿಭಟನೆ ತಡೆದಲ್ಲಿ ರಸ್ತೆ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದಿದ್ದಾರೆ.ಬೆಂಗಳೂರಿನಲ್ಲಿ ನಡೆಯುವ ಟ್ರ್ಯಾಕ್ಟರ್‌ ಪರೇಡ್‌ನಲ್ಲಿ ಮೈಸೂರಿಂದ 200ಕ್ಕೂ ಹೆಚ್ಚು ಟ್ರ್ಯಾಕ್ಟರ್ ಬೆಂಗಳೂರಿಗೆ ತೆರಳಲಿವೆ. ನಗರದ ಮಹಾರಾಜ ಕಾಲೇಜು ಆವರಣದಿಂದ ಇಂದು ಮಧ್ಯಾಹ್ನದ ವೇಳೆಗೆ ಟ್ರ್ಯಾಕ್ಟರ್ ಮೆರವಣಿಗೆ‌ ಆರಂಭಗೊಳ್ಳಲಿದ್ದು, : -’-----