“ಕೃಷಿ ಸಚಿವ ಬಿಸಿ ಪಾಟೀಲ್ ಗೆ ಕಾಮನ್ ಸೆನ್ಸ್ ಇಲ್ಲ” : ರೈತ ಮುಖಂಡ ಬಡಗಲಪುರ ನಾಗೇಂದ್ರ ಮೈಸೂರು,ಜನವರಿ,22,2021(..) :ಕೃಷಿ ಸಚಿವ ಬಿಸಿ ಪಾಟೀಲ್ ಗೆ ಕಾಮನ್ ಸೆನ್ಸ್ ಇಲ್ಲ. ಅದಕ್ಕೆ ಥೂ, ಛೀ ಅಂತ ಉಗಿಸಿಕೊಳ್ಳುತ್ತಿದ್ದಾರೆ. ಕೃಷಿ ಇಲಾಖೆ ದೊಡ್ಡ ಇಲಾಖೆ. ಇದಕ್ಕೆ ಬೇಸಿಕ್ ನಾಲೆಡ್ಜ್ ಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಳಿಗಾಲದಲ್ಲಿ ಹೋಗಿ ರಾಗಿ ಬಿತ್ತನೆ ನಾಟಿ ಮಾಡ್ತಾರೆ. ಯಾರಾದರೂ, ಚಳಿಗಾಲದಲ್ಲಿ ಬಿತ್ತನೆ ಮಾಡ್ತಾರ?, ಹೀಗೆ ಆದರೆ, ಅವರ ಸಚಿವ ಸ್ಥಾನ ಕಳೆದುಕೊಳ್ಳೊದು ಗ್ಯಾರಂಟಿ ಎಂದು ಕಿಡಿಕಾರಿದರು. ಜನರೇ ಅವರ ಸಚಿವ ಸ್ಥಾನ ಕಿತ್ತುಕೊಳ್ಳುತ್ತಾರೆ. ಅವರು ಮಂತ್ರಿ ಆಗೋಕು ಮುಂಚೆ ಟ್ರೈನಿಂಗ್ ಹೋಗೋದು ಒಳ್ಳೆಯದು. 15 ದಿನ ನಾವೇ ತರಬೇತಿ ಕೊಡುತ್ತೇವೆ. ನಂತರ ಸ್ವಲ್ಪ ತಿಳಿದುಕೊಂಡು ಮಾತನಾಡಲಿ ಎಂದು ಟೀಕಿಸಿದರು. : --..- - -