ಅಕ್ರಮ ಚಿನ್ನ ಸಾಗಾಟ: ವ್ಯಕ್ತಿ ಬಂಧನ ಮಂಗಳೂರು.ಜನವರಿ, 21,2021(..) ಗುದದ್ವಾರದೊಳಗೆ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಅಡಿಗಿಸಿಟ್ಟುಕೊಂಡು ತೆರಳುತ್ತಿದ್ದ ಮಡಿಕೇರಿ ಮೂಲದ ವ್ಯಕ್ತಿಯೊಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿಸಿರುವ ವ್ಯಕ್ತಿಯಿಂದ ೨೪ ಕ್ಯಾರೆಟ್‌ನ ೦.೮ ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಒಟ್ಟು ಮೌಲ್ಯ ಸುಮಾರು ರೂ.೪೪.೨ ಲಕ್ಷ ಎನ್ನಲಾಗಿದೆ.ಇಂಟೆಲೆಜೆನ್ಸ್ ವಿಭಾಗದ ಅಧಿಕಾರಿಗಳ ಮಾಹಿತಿಯನ್ನು ಆಧಿರಿಸಿ, ಮಂಗಳೂರು ಅಂತರರಾಷ್ಟಿçÃಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು, ದುಬೈನಿಂದ ಮಂಗಳೂರಿಗೆ, ಇಂದು ಅಂದರೆ ೨೧.೦೧.೨೦೨೧ರಂದು ಏರ್ ಇಂಡಿಯಾ Iಘಿ ೧೮೧೪ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಂಥಹ ಪ್ರಯಾಣಿಕ ಉಬೇದ್ ಬಲಿಯಾತ್ ಅಜೀಜ್ ಎಂಬ ಮಡಿಕೇರಿ ಮೂಲದ ವ್ಯಕ್ತಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಡಾ. ಕಪಿಲ್, ಉಪ ಆಯುಕ್ತರು, ಕಸ್ಟಮ್ಸ್, ಇವರ ಮುಂದಾಳತ್ವದ ಶ್ರೀಕಾಂತ್ ಕೆ., ಮೇಲ್ವಿಚಾರಣಾಧಿಕಾರಿ, ಶ್ರೀಮತಿ ಮನೊಕಾತ್ಯಾಯಿನಿ, ಆಶೀಶ್ ಕುಮಾರ್, ನಿರೀಕ್ಷಕರು ಹಾಗೂ ಇತರರನ್ನು ಒಳಗೊಂಡ ಮಂಗಳೂರು ವಿಮಾನಯಾನ ಕಸ್ಟಮ್ಸ್ ಅಧಿಕಾರಿಗಳ ತಂಡವನ್ನು ಕಸ್ಟಮ್ಸ್ ಇಲಾಖೆಯ ಆಯುಕ್ತರಾದ ಶ್ರೀ ಇಮಾಮುದ್ದಿನ್ ಅಹ್ಮದ್, ಐ.ಆರ್.ಎಸ್. ಅವರು ಪ್ರಶಂಸಿಸಿದ್ದಾರೆ. … . , , . 1814 21.01.2021. . 0.8 24k ₹ 44.2 . , , . , , . , ; . , ; , ; -