“ರೈತರು ತಮ್ಮ ಬೆಳೆ, ತಾವೇ ಬ್ರ್ಯಾಂಡ್ ಮಾಡಿಕೊಂಡಲ್ಲಿ ಆದಾಯ ದ್ವಿಗುಣವಾಗಲಿದೆ” : ಸಚಿವ ಬಿ.ಸಿ.ಪಾಟೀಲ್ ಮೈಸೂರು,ಜನವರಿ,19,2021(..): ರೈತ ತನ್ನ ಬೆಳೆಗೆ ತಾನೇ ಬೆಲೆ ನಿಗದಿಪಡಿಸಬೇಕು. ತಮ್ಮ ಬೆಳೆಗೆ ತಾವೇ ಬ್ರ್ಯಾಂಡ್ ಮಾಡಿದಲ್ಲಿ ರೈತರ ಆದಾಯ ಖಂಡಿತವಾಗಿಯೂ ದ್ವಿಗುಣಗೊಳ್ಳಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಲಹೆ ನೀಡಿದ್ದಾರೆ. ಮೈಸೂರಿನ ಸಿಎಫ್ ಟಿಆರ್ ಐ ಸಭಾಂಗಣದಲ್ಲಿ ನಡೆದ ಒಂದು ಜಿಲ್ಲೆ ಒಂದು ಉತ್ಪನ್ನ(ಬೆಳೆ)ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ರೈತರು ತಮ್ಮ ಬೆಳೆಗೆ ತಾವೇ ಬ್ರ್ಯಾಂಡ್ ರೂಪಿಸಬೇಕು. ಆಹಾರ ಉತ್ಪನ್ನಗಳ ಸಂಸ್ಕರಣೆಯ ಜೊತೆಗೆ ಮಾರ್ಕೇಟಿಂಗ್ ಕೂಡ ಜ್ಞಾನ ಹೊಂದಬೇಕು ಎನ್ನುವ ನಿಟ್ಟಿನಲ್ಲಿ ಅಸಂಘಟಿತ ವಲಯದಲ್ಲಿರುವ ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳನ್ನು, ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈತರಿಗೆ ತರಬೇತಿ ನೀಡಲಾಗುತ್ತಿದೆ ಎಂದರು. ಕೃಷಿ ಉದ್ಯಮ ರೈತೋದ್ಯಮವಾಗಬೇಕು. ರೈತನು ಕೃಷಿ ಉದ್ಯಮಿಯಾಗಬೇಕು. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯದ ಕೃಷಿ ಚಟುವಟಿಕೆಗಳನ್ನು ಅರಿಯಲು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಉತ್ಪಾದನೆಯ ಜೊತೆಗೆ ಉತ್ಪನ್ನಗಳ ಸಂಸ್ಕರಣೆ, ಅವುಗಳ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಬಹುಮುಖ್ಯವೆಂಬುದು ಅರಿವಾಗಿದೆ ಎಂದು ಹೇಳಿದರು. ರೈತರಿಗೆ ಅನುಕೂಲ ಕಲ್ಪಿಸಲು ಹಾಗೂ ಅವರನ್ನು ಲಾಭದಾಯಕ ಕೃಷಿಯತ್ತ ನಡೆಸಲು ಸಿಎಫ್ ಟಿಆರ್ ಐ ಜೊತೆ ಸಭೆ ನಡೆಸಿ ರೈತರಿಗೆ ತರಬೇತಿ ನೀಡಲು ತೀರ್ಮಾನಿಸಿ, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಹಣ್ಣು ತರಕಾರಿಗಳು, ತೋಟಗಾರಿಕಾ, ಸಾಂಬಾರು, ಸಿರಿಧಾನ್ಯಗಳು, ಎಣ್ಣೆಕಾಳು, ಬೇಕರಿ ಉತ್ಪನ್ನಗಳು ಸೇರಿದಂತೆ ವಿವಿಧ ರೈತ ಉತ್ಪನ್ನ ಬೆಳೆಗಳ ಸಂಸ್ಕರಣೆ ಮಾರುಕಟ್ಟೆಗೆ ತರಬೇತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ತರಬೇತಿ ಪಡೆದ ರೈತರಿಗೆ ಪಿಎಂಎಫ್ ಎಂಇ ಯೋಜನೆಯಡಿ ಆಯ್ಕೆಯಾದ ಜಿಲ್ಲೆಯ ಉತ್ಪನ್ನಕ್ಕೆ ಚಿಕ್ಕ ಉದ್ದಿಮೆ ಪ್ರಾರಂಭಿಸಲು ಶೇ.35 ರಷ್ಟು ಸಹಾಯಧನವನ್ನು ಗರಿಷ್ಠ 10 ಲಕ್ಷ ರೂ.ಗಳವರೆಗೆ ನೀಡಲಾಗುವುದು. ಅಲ್ಲದೇ ಯೋಜನೆಯ ವಿವರವನ್ನು ಕೇಂದ್ರಕ್ಕೆ ಕಳುಹಿಸಿ ಹೆಚ್ಚಿನ ಅನುದಾನ ನೀಡುವಂತೆ ಶಿಫಾರಸು ಮಾಡಲಾಗುವುದು ಎಂದರು. ಈಗಾಗಲೇ ಕೃಷಿ ಇಲಾಖೆಯಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ 2020-21 ನೇ ಸಾಲಿನಲ್ಲಿ ಸುಮಾರು 45 ಕೋ.ರೂ.ಗಳ ಅನುದಾನ ನಿಗದಿಪಡಿಸಲಾಗಿದೆ. ತರಬೇತಿಯ ಸದುಪಯೋಗಪಡಿಸಿಕೊಂಡು ಕೃಷಿಯು ಉದ್ದಿಮೆಯಾಗಬೇಕು ರೈತ ರೈತೋದ್ಯಮಿಯಾಗಬೇಕು ಎಂದು ತಿಳಿಸಿದರು.ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಫ್ ಟಿಆರ್ ಐ ನಿರ್ದೇಶಕಿ ಡಾ.ಶ್ರೀದೇವಿ ಸಿಂಗ್, ವಿಜ್ಞಾನಿಗಳಾದ ಡಾ:ಮಣಿಲಾಲ್, ಡಾ.ಉಮೇಶ್ ಹೆಬ್ಬಾರ್ ಇತರರು ಉಪಸ್ಥಿತರಿದ್ದರು. ….. ‘ ’: .. , . 19, 2021 (..): .. . ’ . ‘ ’ () . , . , .“ , , , , , , , , , .,” . 35% .10 , , . . , . , . , .: / .. / / :-----–----..