ವೀಕ್ಷಕರ ಪಟ್ಟಿಯಲ್ಲಿಲ್ಲ ಶಾಸಕ ಜಿಟಿ ದೇವೇಗೌಡರ ಹೆಸರು: ಉಚ್ಚಾಟಿಸುವ ಮೂನ್ಸೂಚನೆ ತೋರಿದ್ರಾ ಹೆಚ್.ಡಿ ಕುಮಾರಸ್ವಾಮಿ…? ಮೈಸೂರು,ಜನವರಿ,19,2021(..):ಶಾಸಕ ಜಿ.ಟಿ ದೇವೇಗೌಡ ಮತ್ತು ಜೆಡಿಎಸ್ ಪಕ್ಷದ ನಡುವಿನ ಅಂತರ ಮತ್ತಷ್ಟು ಹೆಚ್ಚಾಗಿದ್ದು, ಜಿಟಿ ದೇವೆಗೌಡರು ಮತ್ತು ದಳಪತಿಗಳ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ. ಹೌದು, ಜೆಡಿಎಸ್ ವೀಕ್ಷಕರ ಪಟ್ಟಿಯಲ್ಲಿ ಮೈಸೂರು ಭಾಗದ ಸೀನಿಯರ್ ಲೀಡರ್ ಜಿ.ಟಿ ದೇವೇಗೌಡರ ಹೆಸರು ಕೈಬಿಟ್ಟಿದ್ದು, ಈ ಮೂಲಕ ಜಿಟಿ ದೇವೇಗೌಡರನ್ನ ಉಚ್ಛಾಟಿಸುವ ಮುನ್ಸೂಚನೆ ನೀಡಿದ್ದಾರೆಯೇ ಎಂಬ ಅನುಮಾನ ಉಂಟಾಗಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೆಗೌಡ ಹಾಗೂ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ನೇತೃತ್ವದಲ್ಲಿ ವಿಭಾಗಗಳ ವೀಕ್ಷಕರ ನೇಮಕ ಮಾಡಲಾಗಿದ್ದು, ಈ ಪಟ್ಟಿಯಲ್ಲಿ ಶಾಸಕ ಜಿಟಿ ದೇವೇಗೌಡರ ಹೆಸರನ್ನ ಕೈ ಬಿಟ್ಟು ಹಳೇ ಮೈಸೂರು ಪ್ರಾಂತ್ಯದ ಉಳಿದೆಲ್ಲ ಶಾಸಕರಿಗೆ ಜವಾಬ್ದಾರಿ ನೀಡಿದ್ದಾರೆ. ಕೆಲ ದಿನಗಳ‌‌‌ ಹಿಂದಷ್ಟೇ ಪಕ್ಷದ ಪರ ಇಲ್ಲದವರನ್ನ ಮೈಸೂರಿನಿಂದಲೇ‌ ಉಚ್ಚಾಟಿಸುವುದಾಗಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇದೇ ಬೆನ್ನಲ್ಲೆ ‌ವೀಕ್ಷಕರ ಪಟ್ಟಿಯಿಂದ ಕೈ ಬಿಡುವ ಮೂಲಕ ಜಿಟಿ ದೇವೇಗೌಡರನ್ನ ಉಚ್ಚಾಟಿಸುವ ಮೂನ್ಸೂಚನೆ ತೋರಿದ್ದಾರೆಯೇ. ಈ ಮೂಲಕ ಜಿ. ಟಿ ದೇವೇಗೌಡರನ್ನ ಜಿಡಿಎಸ್ ನಿಂದ ಹೊರಹಾಕಲು ಪ್ಲಾನ್ ನಡೆಯುತ್ತಿದೆಯೇ ?ಎಂಬ ಪ್ರಶ್ನೆ ಎದ್ದಿದೆ. ಇನ್ನು ಇತ್ತ ಮೈಸೂರು ವಿಭಾಗದ ವೀಕ್ಷಕರುಗಳಾಗಿ ಶಾಸಕರಾದ ಹೆಚ್ ಡಿ ರೇವಣ್ಣ, ಸಾ.ರಾ ಮಹೇಶ್, ಪುಟ್ಟರಾಜು, ಅಶ್ವಿನ್ ಕುಮಾರ್, ಅನ್ನದಾನಿ, ಮಾಜಿ‌ ಶಾಸಕ ಚಿಕ್ಕಣ್ಣ, ನಿಖಿಲ್ ಕುಮಾರಸ್ವಾಮಿ, ಮೊಹಮ್ಮದ್ ಜಫ್ರುಲ್ಲಖಾನ್,ಅಬ್ದುಲ್ ಅಜೀಜ್ ಅಬ್ದುಲ್ಲ ಅವರನ್ನ ನೇಮಕ ಮಾಡಲಾಗಿದೆ. …. .. ’ : ?, . 19, 2021 (..): .. .. , . ’ , . .. .. .. ’ , . .. - . .. .: .. / / .. / : - - - – – -