“ಅತ್ಯುತ್ತಮ ಘಟಕಗಳು, ಕಾರ್ಯಕ್ರಮಾಧಿಕಾರಿಗಳು, ಸ್ವಯಂ ಸೇವಕ, ಸೇವಕಿಯರಿಗೆ ಎನ್.ಎಸ್.ಎಸ್.ಪ್ರಶಸ್ತಿ ಪ್ರದಾನ” ಮೈಸೂರು,ಜನವರಿ,16,2021(..): ಮೈಸೂರು ವಿವಿ 2019-20ನೇ ಸಾಲಿನ ಅತ್ಯುತ್ತಮ ಘಟಕಗಳು, ಕಾರ್ಯಕ್ರಮಾಧಿಕಾರಿಗಳು, ಸ್ವಯಂ ಸೇವಕ, ಸೇವಕಿಯರಿಗೆ ಎನ್.ಎಸ್.ಎಸ್.ಪ್ರಶಸ್ತಿ ಪ್ರದಾನ ಮಾಡಲಾಯಿತು. ಶನಿವಾರ ಮಾನಸಗಂಗೋತ್ರಿ ವಿಜ್ಞಾನಭವನದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಿದ್ದ “ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಘಟಕಗಳ ಪ್ರಶಸ್ತಿ ಹಾಸನದ ಸರ್ಕಾರಿ ವಿಜ್ಞಾನ ಕಾಲೇಜು, ಮೈಸೂರಿನ ಎಸ್.ಬಿ.ಆರ್.ಆರ್.ಮಹಾಜನ ಪ್ರ.ದ.ಕಾಲೇಜು, ಮಂಡ್ಯ ಜಿಲ್ಲೆಯ ಬೆಳಗೊಳ ಡಿ ಪೌಲ್ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಮಹಿಳಾ ಕಾಲೇಜುಗಳು ಅತ್ಯುತ್ತಮ ಘಟಕಗಳ ಪ್ರಶಸ್ತಿ ಪಡೆದುಕೊಂಡವು. ಅತ್ಯುತ್ತಮ ಕಾರ್ಯಕ್ರಮಾಧಿಕಾರಿಗಳು ಪ್ರಶಸ್ತಿ ಹಾಸನ ಸರ್ಕಾರಿ ವಿಜ್ಞಾನ ಕಾಲೇಜಿನ ಸಿ.ಎಸ್.ಮೋಹನ್, ಎಸ್.ಬಿ.ಆರ್.ಆರ್.ಮಹಾಜನ ಪ್ರ.ದ.ಕಾಲೇಜು ಡಾ.ಎ.ಜಿ.ಧರ್ಮೇಶ, ಮಂಡ್ಯ ಜಿಲ್ಲೆಯ ಬೆಳಗೊಳ ಡಿ ಪೌಲ್ ಪ್ರಥಮ ದರ್ಜೆ ಕಾಲೇಜಿನ ಬಿ.ಎನ್.ಹೇಮಲತಾ, ಮಂಡ್ಯ ಸರ್ಕಾರಿ ಮಹಿಳಾ ಕಾಲೇಜು ಡಾ.ಎಂ.ಕೆಂಪಮ್ಮ ಪ್ರಶಸ್ತಿ ನೀಡಲಾಯಿತು. ಅತ್ಯುತ್ತಮ ಸ್ವಯಂಸೇವಕರು, ಸ್ವಯಂ ಸೇವಕಿಯರ ಪ್ರಶಸ್ತಿಮೈಸೂರು ಯುವರಾಜ ಕಾಲೇಜು ಎಂ.ಕೆ.ಸಚಿನ್, ಎಸ್.ಬಿ.ಆರ್.ಆರ್.ಮಹಾಜನ ಪ್ರ.ದ ಕಾಲೇಜಿನ ಎಂ.ಸಿದ್ಧಾರ್ಥ, ಎಂ.ಎಂ.ಕೆ ಮತ್ತು ಎಸ್.ಡಿ.ಎಂ ಮಹಿಳಾ ಮಹಾವಿದ್ಯಾಲಯದ ಪಿ.ನಿವೇದಿತಾ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಎಂ.ಜಿ.ಜ್ಯೋತಿಕ ಅವರು ಪ್ರಶಸ್ತಿ ನೀಡಲಾಯಿತು. ಉ.ಕಾ.ಸುಬ್ಬರಾಯಚಾರ್ ಸ್ಮರಣಾರ್ಥ ಪ್ರಶಸ್ತಿ ಅತ್ಯುತ್ತಮ ಸ್ವಯಂ ಸೇವಕ ಮೈಸೂರಿನ ಜ್ಞಾನದೀಪ ಪ್ರಥಮ ದರ್ಜೆ ಕಾಲೇಜು ಎಂ.ಪಿ.ಸಿಶ್ಚಯ್ ಜೈನ್, ಅತ್ಯುತ್ತಮ ಸ್ವಯಂ ಸೇವಕಿಯರಾದ ಮಂಡ್ಯ ಸರ್ಕಾರಿ ಮಹಿಳಾ ಕಾಲೇಜು ವೇದಶ್ರೀ, ಎಂ.ಎಂ.ಕೆ ಮತ್ತು ಎಸ್.ಡಿ.ಎಂ ಮಹಿಳಾ ಮಹಾವಿದ್ಯಾಲಯದ ಶ್ರೀಲಲಿತಾ ಅವರು ಪ್ರಶಸ್ತಿ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್, ಎನ್ ಎಸ್ ಎಸ್ ರಾಜ್ಯ ಅನುಷ್ಠಾನ ಅಧಿಕಾರಿ ಡಾ.ಪೂರ್ಣಿಮಾ ಜೋಗಿ, ಕುಲಸಚಿವ ಪ್ರೊ.ಆರ್‌.ಶಿವಪ್ಪ, ಎನ್ ಎಸ್ ಎಸ್ ಸಂಯೋಜನಾಧಿಕಾರಿ ಡಾ.ಬಿ.ಚಂದ್ರಶೇಖರ್ ಇತರರು ಇದ್ದರು. …. , . , , . 16, 2021 (..): , , 2019-20. ‘ ’ , , . : . , , .... , , . ’ . : .. . , ; . .. .... , ; .. , ; . . . ’ , . : .. , ; . .... , ; . ... ... ’ ; .. ’ ... : .> ; . ’ , ; ... ... ’ .. . , -, , , , . , , . . , , , . . , .: / / :------