ಕಾಂಗ್ರೆಸ್ ಸತ್ತಿದೆ, ವಿರೋಧ ಪಕ್ಷದ ಜೊತೆಗೆ ಬಿ.ಎಸ್.ವೈ ಅಡ್ಜಸ್ಟ್ ಮೆಂಟ್ ಮಾಡಿಕೊಂಡಿದ್ದಾರೆ : ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬೆಂಗಳೂರು,ಜನವರಿ,13,2021(..): ಬಿ.ಎಸ್.ವೈ ಬ್ಲ್ಯಾಕ್ ಮೇಲ್ ಮಾಡಿದ ಮೂವರಿಗೆ ಸ್ಥಾನ ನೀಡಿದ್ದಾರೆ. ಕಾಂಗ್ರೆಸ್ ಸತ್ತಿದೆ. ವಿರೋಧ ಪಕ್ಷದ ಜೊತೆಗೆ ಬಿ.ಎಸ್.ವೈ ಅಡ್ಜೆಸ್ಟ್ ಮೆಂಟ್ ಮಾಡಿಕೊಂಡಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ಮೊದಲು ಪಕ್ಷಕ್ಕೆ ದುಡಿದವ್ರರಿಗೆ, ಸರ್ಕಾರ ಬರಲು ಕಾರಣಕರ್ತರಾದವರಿಗೆ, ಈಗ ಸಿಡಿ ಇಟ್ಟವ್ರದೊಂದು ಕೋಟಾ ಪ್ಲಸ್ ಆಗಿದೆ. ಬ್ಯಾಕ್ ಮೇಲ್ ಮಾಡಿದವರಿಗೆ, ಹಣ ನೀಡಿದವರಿಗೆ ಬಿ.ಎಸ್.ವೈ ಸ್ಥಾನ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಎಸ್ ವೈ ಹಾಗೂ ಪುತ್ರ ವಿಜಯೇಂದ್ರ ಕಾಂಗ್ರೆಸ್ ನವರನ್ನು ಖರೀದಿಸಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಅನೇಕರು ಇವರ ಜೊತೆಗಿದ್ದಾರೆ. ಬಿ.ಎಸ್.ವೈ ಅಪವಿತ್ರ ಕೆಲಸ ಮಾಡಿದ್ದಾರೆ. ವೀರಶೈವ, ಲಿಂಗಾಯತ ಸಮುದಾಯದ ಹೆಸರಿನಲ್ಲೂ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಮೋದಿ, ಅಮಿತ್ ಶಾ ಮನಸ್ಸಿಲ್ಲದಿದ್ದರೂ, ಇವರಿಗೆ ಸ್ಥಾನ ನೀಡಿದ್ದಾರೆ. : ------