ಕಬಿನಿ ಕಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುತ್ತಾಟ! ಬೆಂಗಳೂರು, ಜನವರಿ 13, 2020 (..):ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಕಾಡಿನತ್ತ ಪ್ರಯಾಣ ಬೆಳೆಸಿದ್ದಾರೆ. ಹೌದು. ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕು ನಾಗರಹೊಳೆಯ ಕಬಿನಿಯಲ್ಲಿ ಬೀಡು ಬಿಟ್ಟಿದೆ ದಚ್ಚು ಆ್ಯಂಡ್ ಟೀಂ. ಬಿಡುವಿನ ವೇಳೆ ವನ್ಯ ಜೀವಿಗಳ ಫೋಟೋಗ್ರಫಿ ಮಾಡಲು ಸಫಾರಿ ತೆರಳುವ ದರ್ಶನ್ ಇದೀಗ ದರ್ಶನ್ ಕಬಿನಿಯಲ್ಲಿ ಸಫಾರಿ ಮಾಡುತ್ತಿದ್ದಾರೆ. ದರ್ಶನ್ ಕ್ಯಾಮರಾದಲ್ಲಿ ಹುಲಿ ಸೆರೆಹಿಡಿಯತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.ಸದ್ಯಕ್ಕೆ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡಿರುವ ಅಭಿಮಾನಿಗಳ ನೆಚ್ಚಿನ ಚಾಲೆಂಜಿಂಗ್ ಸ್ಟಾರ್ ಕಾಡಿನಲ್ಲಿ ಕಾಲ ಕಳೆಯುತ್ತಿದ್ದಾರೆ.