“ಬೇರೆ ಮಠಗಳಿಗೆ, ಸಂಸ್ಥೆಗಳಿಗೆ ಸುತ್ತೂರು ಮಠ ಮಾದರಿ” : ಸಿಎಂ ಬಿ.ಎಸ್.ಯಡಿಯೂರಪ್ಪ ಮೈಸೂರು,ಜನವರಿ,11,2021(..): ಸುತ್ತೂರು ಮಠ ಜಾತಿ, ಮತ‌ ಮೀರಿದ ಮಾನವೀಯ ಬಾಂಧವ್ಯವನ್ನು ಎಲ್ಲರ ಜೊತೆಗೂ ಹೊಂದಿದೆ. ಬೇರೆ ಮಠಗಳಿಗೆ, ಸಂಸ್ಥೆಗಳಿಗೆ ಸುತ್ತೂರು ಮಠ ಮಾದರಿಯಾಗಿದೆ. ಸುತ್ತೂರು ಮಠದ ಕಾರ್ಯವ್ಯಾಪ್ತಿ ಇನ್ನಷ್ಟು ಹೆಚ್ಚಾಗಲಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಆಶಯವ್ಯಕ್ತಪಡಿಸಿದರು.ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ 1061 ಜಯಂತಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ, ಮಾತನಾಡಿದ ಅವರು, ಮಠದ ಕಾರ್ಯಗಳಿಗೆ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ ಎಂದು ತಿಳಿಸಿದರು.ಈ ಸಂದರ್ಭ ಸುತ್ತೂರು ಪಂಚಾಂಗ ಹಾಗೂ ಕೃತಿ ಬಿಡುಗಡೆಗೊಳಿಸಿದರು. ಸುತ್ತೂರು ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಚಿವ ನಾರಯಣ ಗೌಡ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ತನ್ವೀರ್ ಸೇಠ್, ಎನ್.ಮಹೇಶ್,ನಿರಂಜನ್ ಕುಮಾರ್, ನಟ ದೊಡ್ಡಣ್ಣ, ನಿರ್ದೇಶಕ ರಾಜೇಂದ್ರ ಪ್ರಸಾದ್ ಮತ್ತೀತರರು ಉಪಸ್ಥಿತರಿದ್ದರು. ….. “ ” – , .11, 2021 (..): “ . ’. ,” .. . 1061st , , . , . . . - .. , , .. , . , , . , , , , .: / / 1061 : --- -- ..