‘’ರಾಸ್ಕಲ್ ಕತ್ತೆ ಕಾಯೋಕೆ ಬಂದಿದ್ದೀಯಾ?’’ : ಅಧಿಕಾರಿ ಮೇಲೆ ಸಚಿವ ಮಾಧುಸ್ವಾಮಿ ದರ್ಪ…! ತುಮಕೂರು,ಜನವರಿ,07,2021(..) :ರಾಸ್ಕಲ್ ಕತ್ತೆ ಕಾಯೋಕೆ ಬಂದಿದ್ದೀಯಾ?, ಜಾಡಿಸಿ ಒದ್ರೆ ಎಲ್ಲಿ ಹೋಗಿ ಬಿದ್ದಿರ್ತೀಯಾ ಗೊತ್ತಾ ಎಂದು ಸಚಿವ ಮಾಧುಸ್ವಾಮಿ ಎಇಇ ಮೇಲೆ ನಾಲಗೆ ಹರಿಬಿಟ್ಟಿದ್ದಾರೆ. ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಎಇಇ ರಂಗಸ್ವಾಮಿ ಮೇಲೆ ಕಿಡಿಕಾರಿದ ಸಚಿವ ಮಾಧುಸ್ವಾಮಿ, ಜಿಪೆಂ ಎಂಜಿನಿಯರ್ ವಿಭಾಗದಲ್ಲಿ ಕೆಲಸವಾಗಿಲ್ಲ. ಗುತ್ತಿದಾರರನ್ನು ಕರೆಯಿಸಿ ಯಾಕೆ ಕೆಲಸ ಮುಗಿಸಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ. ನಿನ್ನ ಹೆಂಡ್ತಿ ಸೀರೆ ಯಾವ ಸೋಪಿನಲ್ಲಿ ತೊಳೆಯುತ್ತಿಯಾ. ಈ ನನ್ನ ಮಕ್ಕಳನ್ನು ಎಲ್ಲರನ್ನೂ ಸಸ್ಪೆಂಡ್ ಮಾಡಿಬಿಡಿ ಎಂದು ಸಿಇಒಗೆ ಸೂಚಿಸಿದ್ದಾರೆ. :----