ಮನುಕುಲ ಬಸವಳಿದ ಈ ದಿನಗಳು ಇಂದಿಗೆ ಕೊನೆಗೊಳ್ಳಲಿ : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ…! ಬೆಂಗಳೂರು,ಜನವರಿ,2021(..): ಕೊರೋನಾ ಸಂಕಷ್ಟದಿಂದ ನಲುಗಿದ ವರ್ಷ, ಮನುಕುಲ ಬಸವಳಿದ ಈ ದಿನಗಳು ಇಂದಿಗೆ ಕೊನೆಗೊಳ್ಳಲಿ ಎಂದು ಧೀಶಕ್ತಿಯೇ ಆಗಿರುವ ಪ್ರಕೃತಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ನಾಡಿನ ಜನತೆಗೆ ಹೊಸವರ್ಷದ ಹಾರ್ದಿಕ ಶುಭಾಶಯಗಳು. 2021 ಹೊಸ ವರ್ಷವು ಎಲ್ಲರ ಬದುಕಿನಲಿ ಕಷ್ಟಗಳ ಕಳೆದು ಹೊಸತನವ ತರಲಿ. ಎಲ್ಲರ ಆರೋಗ್ಯ ಚೇತನಮಯವಾಗಲಿ ಎಂದು ತಿಳಿಸಿದ್ದಾರೆ. : -------- ..