ಮೈಸೂರಿನಲ್ಲಿ ಜ್ಞಾನ ಪೀಠ ಪುರಸ್ಕೃತ ಕುವೆಂಪು ಅವರ ಜನ್ಮದಿನಾಚಾರಣೆ: ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಭಾಗಿ….. ಮೈಸೂರು,ಡಿಸೆಂಬರ್,29,2020(..):ಇಂದು ನಗರದ ಗನ್ ಹೌಸ್ ಬಳಿ ಇರುವ ಕುವೆಂಪು ಉದ್ಯಾನವನದಲ್ಲಿ ಕುವೆಂಪುರವರ ಜನ್ಮ ದಿನಾಚರಣೆ ಅಂಗವಾಗಿ ಕಾರ್ಯಕ್ರಮವನ್ನು ಜಿಲ್ಲಾ ಸಾಹಿತ್ಯ ಪರಿಷತ್ ಮತ್ತು ಮೈಸೂರು ನಗರ ಪಾಲಿಕೆ ಆಯೋಜಿಸಿದ್ದು, ವಿಶ್ವ ಮಾನವ ಜ್ಞಾನ ಪೀಠ ಪುರಸ್ಕೃತ ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶಖರ್, ಕ.ಸಾ.ಪ.ಅಧ್ಯಕ್ಷ ರಾದ ವೈ.ಡಿ.ರಾಜಣ್ಣ, ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿಯ ಅಧ್ಯಕ್ಷರಾದ ಜಾಕೀರ್ ಹುಸೇನ್,ಆ.ಪ್ರ.ಪ್ರ.ಸ.ರಾಜ್ಯ ಸಂಚಾಲಕರಾದ ಡೈರಿ ವೆಂಕಟೇಶ್, ವಿಶ್ವ ,ಸುನಿಲ್ ಹೇಮಂತ್ ಮತ್ತು ಇನ್ನಿತರರು ಪಾಲ್ಗೊಂಡಿದ್ದರು. : --- - -