ಮತದಾನ ಮಾಡಲು ಹೊರಟ ಮಹಿಳೆ ಅಪಘಾತಕ್ಕೆ ಬಲಿ…! ಬೆಂಗಳೂರು,ಡಿಸೆಂಬರ್,27,2020(..): ರಾಜ್ಯದಲ್ಲಿ ಎರಡನೇ ಹಂತದ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಮತದಾನ ಮಾಡಲು ಹೊರಟ ಮಹಿಳೆ ಅಫಘಾತಕ್ಕೆ ಬಲಿಯಾಗಿದ್ದಾರೆ. ಹೊಸಕೋಟೆ-ಕೋಲಾರ ಹೆದ್ದಾರಿಯಲ್ಲಿ ಬೈಕ್ ಮತ್ತು ಕೆಎಸ್ ಆರ್ ಟಿಸಿ ಬಸ್ ಮಧ್ಯೆ ಅಪಘಾತ ಸಂಭವಿಸಿದ್ದು, ಹೇಮಾವತಿ(25) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೊತೆಯಲ್ಲಿದ್ದ ಸಹೋದರ ರಾಘವೇಂದ್ರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಸಕೋಟೆಯ ಅಯ್ಯಪ್ಪನಗರದ ನಿವಾಸಿ ಸ್ವಗ್ರಾಮಕ್ಕೆ ಆಕ್ಟಿವಾ ಬೈಕ್ ನಲ್ಲಿ ಮತದಾನಕ್ಕೆಂದು ಹೋಗುವಾಗ ಕೆಎಸ್ ಆರ್ ಟಿಸಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬೈಕ್ ನಿಂದ ಬಿದ್ದ ಮಹಿಳೆ ಮೇಲೆ ಕೆಎಸ್ ಆರ್ ಟಿಸಿ ಬಸ್ ಚಕ್ರ ಹಾದು ಹೋಗಿ ಮಹಿಳೆ ಸಾವನ್ನಪಿದ್ದಾರೆ. ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : ------ …!