ಸಂವಾದ ಕಾರ್ಯಕ್ರಮ: ಸಿಎ ನಿವೇಶನ ಹಂಚಿಕೆಗೆ ಮುಡಾ ಪ್ಲ್ಯಾನ್ ಮೈಸೂರು,ಡಿಸೆಂಬರ್,22,2020(..):ತನ್ನ ವ್ಯಾಪ್ತಿಯ ಸಿಎ ನಿವೇಶನಗಳನ್ನು ಹಂಚಿಕೆ ಮಾಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಪ್ಲ್ಯಾನ್ ಮಾಡಿದೆ. ಸಿಎ ನಿವೇಶನ ಕುರಿತಾಗಿ ಇಂದು ಮೊದಲ ಬಾರಿಗೆ ಮುಡಾ ವತಿಯಿಂದ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಉಪಸ್ಥಿತಿಯಲ್ಲಿ ಮೈಸೂರು ವಿವಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಸಂವಾದದಲ್ಲಿ ಸಿಎ ನಿವೇಶನಗಳ ಹಂಚಿಕೆ ಕುರಿತು ಮಾಹಿತಿ, ನೋಟಿಫಿಕೇಷನ್, ಸಿಎ ನಿವೇಶನ ಹಂಚಿಕೆ ಸಂಬಂಧಪಟ್ಟಂತೆ ಪ್ರಶ್ನೋತ್ತರಗಳ ವಿನಿಮಯ ಮಾಡಲಾಯಿತು. ಸಂವಾದದಲ್ಲಿ ಪ್ರಾಧಿಕಾರದ ಯೋಜನೆಗಳ ಕುರಿತಾಗಿ ಮುಡಾ ಆಯುಕ್ತ ನಟೇಶ್ ಮಾಹಿತಿ ನೀಡಿದರು. ಸಂವಾದದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಮುಡಾ ಅಧಿಕಾರಿಗಳು ಭಾಗಿಯಾಗಿದ್ದರು. : - – -