ಕೊರೊನಾದಿಂದಾಗಿ ಸುತ್ತೂರು ಜಾತ್ರಾ ಮಹೋತ್ಸವ ರದ್ದು…! ಮೈಸೂರು,ಡಿಸೆಂಬರ್,20,2020(..) :ಫೆಬ್ರವರಿಯಲ್ಲಿ ನಡೆಯಬೇಕಿದ್ದ ಸುತ್ತೂರು ಜಾತ್ರಾ ಮಹೋತ್ಸವವನ್ನು ಕೊರೊನಾದಿಂದಾಗಿ ಈ ವರ್ಷ ಸುತ್ತೂರು ಜಾತ್ರೆ ರದ್ದುಗೊಳಿ ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.ಫೆಬ್ರವರಿ 8ರಿಂದ ಫೆಬ್ರವರಿ13ರ ವರೆಗೆ ನಡೆಯಬೇಕಿದ್ದ ಸುತ್ತೂರು ಜಾತ್ರೆ. ಜಾತ್ರೆಯಲ್ಲಿ ಜರುಗುತ್ತಿದ್ದ ಎಲ್ಲಾ ಕಾರ್ಯಕ್ರಮಗಳು ಸಂಪೂರ್ಣ ರದ್ದುಗೊಳಿಸಲಾಗಿದೆ. ಫೆಬ್ರವರಿ 9ರಂದು ಮಾತ್ರ ಸಂಜೆ ಶ್ರೀಮಠದಿಂದ ಉತ್ಸವ ಮೂರ್ತಿಯನ್ನು ಗದ್ದುಗೆಗೆ ತರುವುದು. ಶ್ರೀ ಕ್ಷೇತ್ರದಲ್ಲಿರುವ ಎಲ್ಲಾ ದೇವರಿಗೂ ಸಾಂಪ್ರದಾಯಿಕವಾಗಿ ವಿಶೇಷ ಪೊಜೆ ಸಲ್ಲಿಸಲಾಗುವುದು. ರಥೋತ್ಸವ, ತೆಪ್ಪೋತ್ಸವ ಇತ್ಯಾದಿ ಪೊಜಾ ಕೈಕಂರ್ಯಗಳನ್ನು ಸಾಂಕೇತಿಕವಾಗಿ ನೇರವೇರಿಸುವುದು. ಅಲ್ಲದೇ ಈ ಪೂಜಾ ಕೈಂಕರ್ಯಗಳನ್ನು ಭಕ್ತರ ಅನುಕೂಲಕ್ಕಾಗಿ ನೇರಪ್ರಸಾರಕ್ಕೆ ಸಮಿತಿ ನಿರ್ಧರಿಸಿದೆ. : -- -