ರೈತರ ಪ್ರತಿಭಟನೆ ರಾಜಕೀಯ ಪ್ರೇರಿತ ತಿರುವು ಪಡೆದಿರುವುದು ದುರದೃಷ್ಟಕರ : ಡಿಸಿಎಂ ಡಾ.ಅಶ್ವಥ್ ನಾರಾಯಣ್ ಬೆಂಗಳೂರು,ಡಿಸೆಂಬರ್,14,2020(..): ರೈತರ ಪ್ರತಿಭಟನೆ ರಾಜಕೀಯ ಪ್ರೇರಿತ ಸನ್ನಿವೇಶವಾಗಿ ತಿರುವು ಪಡೆದಿರುವುದು ದುರದೃಷ್ಟಕರ. ಸರ್ಕಾರ ಯಾವತ್ತೂ ಮುಕ್ತ ಮಾತುಕತೆಗೆ ಹಾಗೂ ರೈತರ ಗೊಂದಲಗಳನ್ನು ಬಗೆಹರಿಸಲು ಸಿದ್ಧವಾಗಿದೆ ಎಂದು ಡಿಸಿಎಂ, ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಹೇಳಿದ್ದಾರೆ.ದೇಶದ ಅನೇಕ ರಾಜ್ಯಗಳ ರೈತರು ಈ ಮಸೂದೆಗಳನ್ನು ಸ್ವೀಕರಿಸಿದ್ದು, ಅವುಗಳ ಉತ್ತಮ ಪ್ರತಿಫಲವನ್ನು ಎದುರು ನೋಡುತ್ತಿದ್ದಾರೆ. ನಮ್ಮ ಅನ್ನದಾತರು ಯಾವುದೇ ರಾಜಕೀಯ ಕುಮ್ಮಕ್ಕಿಗೆ ಒಳಗಾಗದೆ, ಶಾಂತಿಯುತವಾಗಿ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ನನ್ನ ಮನವಿ ಎಂದಿದ್ದಾರೆ. ರೈತ ಮಸೂದೆಗಳು ದೂರದೃಷ್ಟಿಯ ಯೋಜನೆಗಳಾಗಿದ್ದು, ರೈತರಿಗೆ ಯಾವುದೇ ರೀತಿಯ ಅಡೆತಡೆಗಳಿಲ್ಲ. ಅದಾಗ್ಯೂ ಏನಾದರೂ ಸಂಶಯಗಳಿದ್ದರೆ, ಸರ್ಕಾರದೊಂದಿಗೆ ಚರ್ಚಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಅವಕಾಶವಿದೆ ಎಂದು ಟ್ವಿಟರ್ ನಲ್ಲಿ ತಿಳಿಸಿದ್ದಾರೆ. … : . , . 14, 2020 (..): “ ’ . ’ ,” . . , . .: / . / : -----’---.