ನಾವು ಯಾರು ಸಾರಿಗೆ ಮುಷ್ಕರಕ್ಕೆ ಕರೆ ಕೊಟ್ಟಿಲ್ಲ : ಯೂನಿಯನ್ ಮುಖಂಡರಿಂದ ಮಾಹಿತಿ ಬೆಂಗಳೂರು,ಡಿಸೆಂಬರ್,13,2020(..): ನಾವು ಯಾರು ಸಾರಿಗೆ ಮುಷ್ಕರಕ್ಕೆ ಕರೆ ಕೊಟ್ಟಿಲ್ಲ. ಮುಷ್ಕರಕ್ಕೆ ಕರೆ ಕೊಟ್ಟವರೊಂದಿಗೆ ಮಾತನಾಡಿ ಎಂದು ಯೂನಿಯನ್ ಮುಖಂಡರು ಸಾರಿಗೆ ಸಚವ ಲಕ್ಷ್ಮಣ ಸವದಿಗೆ ತಿಳಿಸಿದ್ದಾರೆ. ಯೂನಿಯನ್ ಮುಖಂಡರ ಜೊತೆಗೆ ಸಚಿವ ಲಕ್ಷ್ಮಣ ಸವದಿ ನಡೆಸಿದ ಸಭೆಯಲ್ಲಿ ಮಾತನಾಡಿದ ಮುಖಂಡರು, ನಾವು ಯಾರು ಸಾರಿಗೆ ಮುಷ್ಕರಕ್ಕೆ ಕರೆ ಕೊಟ್ಟಿಲ್ಲ. ಮುಷ್ಕರಕ್ಕೆ ಕರೆ ಕೊಟ್ಟವರೊಂದಿಗೆ ಮಾತನಾಡಿ. ನಮ್ಮ ನೌಕರರು ಕೆಲಸ ಮಾಡಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ. ಮುಷ್ಕರ ಕೈಗೊಂಡಿರುವ ಮುಖಂಡರ ಜೊತೆಗೆ ಚರ್ಚಿಸಿದರೆ ಸಮಸ್ಯೆ ಬಗೆಹರಿಯಬಹುದು ಎಂದು ಸಚಿವರಿಗೆ ಸಲಹೆ ನೀಡಿದ್ದಾರೆ. :------- -