ಚಾಲಕನ ಅಜಾಗರೂಕತೆ : ಕಾಂಪೌಂಡ್ ಗುದ್ದಿದ ಲಾರಿ ಮೈಸೂರು,ಡಿಸೆಂಬರ್,11,2020(..): ಚಾಲಕನ ಅಜಾಗರೂಕತೆಯಿಂದ ಭಾರತೀಯ ಭಾಷೆಗಳ ಭಾಷಿಕ‌ ದತ್ತಾಂಶ ಒಕ್ಕೂಟದ ಕಟ್ಟಡದ ಕಾಂಪೌಂಡ್ ಗುದ್ದಿದ ಲಾರಿ. ಮೈಸೂರು-ಹುಣಸೂರು ರಸ್ತೆಯ ಬಿ.ಎಂ.ಎಚ್ ಆಸ್ಪತ್ರೆ ಬಳಿ ತಡ ರಾತ್ರಿ ಜೋಳ ಅನ್ಲೋಡ್ ಮಾಡಿ ಹಿಂತಿರುಗುವಾಗ ಘಟನೆ ನಡೆದಿದೆ. ಘಟನೆಯಲ್ಲಿ ಚಾಲಕ ಗಂಭೀರ ಗಾಯಗೊಂಡಿದ್ದು, ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ವಿವಿ ಪುರಂ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. : ’----