ನಾಳೆ ದಿನ ತಮಿಳರು ಕೇಳಿದ್ರೂ ನಿಗಮ ರಚನೆ ಮಾಡ್ತೇವೆ- ಡಿಸಿಎಂ ಅಶ್ವಥ್ ನಾರಾಯಣ್… ಬೆಂಗಳೂರು,ಡಿಸೆಂಬರ್,4,2020(..):ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿದ್ದನ್ನ ವಿರೋಧಿಸಿ ನಾಳೆ ವಿವಿಧ ಕನ್ನಡ ಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದಾರೆ. ಈ ಮಧ್ಯೆ ತಮಿಳರು ಕೇಳಿದರೇ ಅವರಿಗೂ ನಿಗಮ ರಚನೆ ಮಾಡುತ್ತೇವೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆ ನೀಡಿದ್ದಾರೆ. ನಾಳಿನ ಬಂದ್ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಮರಾಠಿಗರು ನಮ್ಮವರು ಹೀಗಾಗಿ ಅವರಿಗಾಗಿ ಅಭಿವೃದ್ದಿ ನಿಗಮವನ್ನು ಮಾಡಲಾಗಿದ್ದು, ನಾಳೆ ದಿನ ತಮಿಳರು ನಮಗೂ ಕೂಡ ಅಭಿವೃದ್ದಿ ನಿಗಮ ಮಾಡಿ ಅಂತ ಮನವಿ ಮಾಡಿಕೊಂಡರೇ ಅವರಿಗೂ ಅಭಿವೃದ್ದಿ ನಿಗಮವನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ. ಹಾಗೆಯೇ ತಮಿಳಿಗರು ಕೂಡ ನಮ್ಮ ರಾಜ್ಯದಲ್ಲಿ 10 ವರ್ಷಗಳಿಂದ ಇದ್ದಾರೆ. ಇಲ್ಲಿ 10‌ ವರ್ಷಗಳಿಂದ ಇದ್ದರೆ ಅವರು ಕನ್ನಡಿಗರು ಎಂದಾಗುತ್ತದೆ ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು. : – – –- - - .