ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗಲು ಹೆಚ್.ವಿಶ್ವನಾಥ್ ನಿರ್ಧಾರ… ಬೆಂಗಳೂರು,ಡಿಸೆಂಬರ್,1,2020(..):ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹ ಎಂದು ಹೈಕೋರ್ಟ್ ತೀರ್ಪು ನೀಡಿದ ಹಿನ್ನೆಲೆ, ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ವಿಧಾನ ಪರಿಷತ್ ಸದಸ್ಯ ಹೆಚ್,ವಿಶ್ವನಾಥ್ ನಿರ್ಧರಿಸಿದ್ದಾರೆ. ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ವಿಶ್ವನಾಥ್, ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುತ್ತೇನೆ. ಹೈಕೋರ್ಟ್ ತೀರ್ಪಿನಿಂದ ದೊಡ್ಡ ದುರಂತ ಆಗಿಲ್ಲ. ನಾನು ರಾಜಕಾರಣವನ್ನ ವ್ಯವಹಾರವಾಗಿ ತೆಗೆದುಕೊಂಡಿಲ್ಲ. ನನ್ನ ಪರ ಸರ್ಕಾರ ಸಮರ್ಥವಾಗಿ ವಾದ ಮಂಡಿಸಿಲ್ಲ. ನನಗೆ ಕಾನೂನಾತ್ಮಕವಾಗಿ ಯಾವುದೇ ಸಹಾಯ ಮಾಡಲಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ಹಾಗೆಯೇ ಯಾವುದೇ ಸರ್ಕಾರವನ್ನ ತರಲು ಸಮ್ಮಿಶ್ರ ಸರ್ಕಾರವನ್ನ ಬೀಳಿಸಲಿಲ್ಲ. ಹೊಂದಾಣಿಕೆ ಇಲ್ಲದರಾಕ್ಷಸ ಸರ್ಕಾರ ಬೀಳಿಸಲು ಅಂದು ಆ ನಿರ್ಧಾರ ಕೈಗೊಂಡಿದ್ದವು ಎಂದು ಹೆಚ್.ವಿಶ್ವನಾಥ್ ತಿಳಿಸಿದರು. …. . , .1, 2020 (..): . ’ . , ’ . . “ , ’ ,” .“ . ,” .: . / / / : - . - - – -