ನ.22 ರಂದು ಸಾಹಿತಿ ಎಸ್ .ಎಲ್ .ಭೈರಪ್ಪರ ‘ಅಂಚು’ ಕಾದಂಬರಿ ಕುರಿತು ಉಪನ್ಯಾಸ…. ಬೆಂಗಳೂರು,ನವೆಂಬರ್,19,2020(..):ಎಸ್ .ಎಲ್ .ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರ ‘ಅಂಚು’ ಕಾದಂಬರಿ ಕುರಿತು ನವೆಂಬರ್ 22 ರಂದು ಉಪನ್ಯಾಸ ನಡೆಯಲಿದೆ. ಎಸ್ .ಎಲ್ .ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಸಾಹಿತಿ ಎಸ್,ಎಲ್ ಭೈರಪ್ಪ ಅವರ ಕಾದಂಬರಿಗಳ ಕುರಿತಾದ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ಮೊದಲ ಉಪನ್ಯಾಸ – ಅಂಚು ಕಾದಂಬರಿಯ ಕುರಿತು ನಡೆಯಲಿದೆ. ನ.22 ಭಾನುವಾರದಂದು ಬೆಳಿಗ್ಗೆ 10.30ಕ್ಕೆ ಈ ಉಪನ್ಯಾಸ ನಡೆಯಲಿದ್ದು, ಕಾರ್ಯಕ್ರಮದ ದಿನ ಆಸಕ್ತರು ./SLB_W1 ಈ ಲಿಂಕ್ ನ ಮೂಲಕ ನೇರಪ್ರಸಾರ ವೀಕ್ಷಿಸಬಹುದು. ಸಾಹಿತಿ ಎಸ್ ಎಲ್ ಭೈರಪ್ಪ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಅನುವಾದಕ ರಂಗನಾಥ್ ಪ್ರಸಾದ್, ಭೌತಶಾಸ್ತ್ರಜ್ಞ ಪ್ರಸಾದ್ ಬಾಪಟ್, ಲೇಖಕ ಅರ್ಜುನ್ ಭಾರಧ್ವಜ್ ಉಪಸ್ಥಿತರಿರಲಿದ್ದಾರೆ. … .. ’ ‘’ . 22Bengaluru, . 19, 2020 (..): .. ’ ‘’ 22, .. . 10.30 : ./SLB_W1. .. . , , . : . .- - -