ಮಕ್ಕಳ ದಿನಾಚರಣೆ, ಜವಾಹರ್ ಲಾಲ್ ನೆಹರು ಜನ್ಮದಿನಕ್ಕೆ ಗಣ್ಯರಿಂದ ಶುಭಾಶಯ ಬೆಂಗಳೂರು,ನವೆಂಬರ್,14,2020(..): ದೇಶದ ಪ್ರಥಮ ಪ್ರಧಾನಿ ಪಂಡಿತ್ ಶ್ರೀ ಜವಾಹರ್ ಲಾಲ್ ನೆಹರು ಅವರ ಸ್ಮರಣೆಗಳ ಜೊತೆಗೆ ಮಕ್ಕಳ ದಿನಾಚರಣೆಗೆ ಗಣ್ಯರು ಶುಭಾಶಯಕೋರಿದ್ದಾರೆ.ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ದೇಶದ ಪ್ರಥಮ ಪ್ರಧಾನಿ ಪಂಡಿತ್ ಶ್ರೀ ಜವಾಹರ್ ಲಾಲ್ ನೆಹರು ಅವರ ಸಂಸ್ಮರಣೆಗಳ ಜೊತೆಗೆ ನಾಡಿನ ಎಲ್ಲ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಪ್ರೀತಿಯ ಶುಭಾಶಯಗಳು ಕೋರಿದ್ದಾರೆ. ನಾಳಿನ ಭವ್ಯ ಭಾರತಕ್ಕಾಗಿ ಇಂದಿನ ಮಕ್ಕಳ ಸಮರ್ಪಕ ಪೋಷಣೆ, ರಕ್ಷಣೆ ಮತ್ತು ಶಿಕ್ಷಣ ನಮ್ಮೆಲ್ಲರ ಹೊಣೆಯಾಗಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಅವರ ಸರ್ವತೋಮುಖ ಬೆಳವಣಿಗೆಗೆ ಅವಕಾಶ ಕಲ್ಪಿಸೋಣ ಎಂದು ಟ್ವೀಟ್ ಮಾಡಿದ್ದಾರೆ. ಜಾತ್ಯತೀತ ಮೌಲ್ಯದ ಪ್ರಬಲ ಪ್ರತಿಪಾದಕ, ಕಾಂಗ್ರೆಸ್ ಪಕ್ಷದ ಹೆಮ್ಮೆಯ ನಾಯಕ ಮತ್ತು ಮಕ್ಕಳಲ್ಲಿ ದೇವರನ್ನು ಕಂಡ ಮಾನವತಾವಾದಿ,‌ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಹುಟ್ಟುಹಬ್ಬದಂದು ಅಭಿಮಾನದಿಂದ‌ ಸ್ಮರಿಸುತ್ತಾ, ಗೌರವ ನಮನ‌ ಸಲ್ಲಿಸುವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ’ , . 14, 2020 (..): ’ . . .. , . “ .” ’ . :’------