‘ಸ್ವಚ್ಚ ವಾಯು ಸ್ಟ್ರೀಟ್ ಟೆಸ್ಟ್ ಬೆಡ್’ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಬಿಎಸ್ ವೈ… ಬೆಂಗಳೂರು, ನವೆಂಬರ್ 7,2020(..):ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ಇಂದು ಭಾರತದಲ್ಲಿ ಮೊಟ್ಟಮೊದಲ ಸ್ವಚ್ಚ ವಾಯು ಸ್ಟ್ರೀಟ್ ಟೆಸ್ಟ್ ಬೆಡ್ ಕಾರ್ಯಕ್ರಮವನ್ನ ಉದ್ಘಾಟಿಸಿದರು. ನಗರದ ಚರ್ಚ್ ಸ್ಟ್ರೀಟ್, ಮೆಟ್ರೋ ನಿಲ್ದಾಣ ನಿರ್ಗಮನದ ಬಳಿ ನಗರ ಭೂ ಸಾರಿಗೆ ನಿರ್ದೇಶನಾಲಯ, ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಕ್ಯಾಟಪಲ್ಟ್ ಯು.ಕೆ. ಹಾಗೂ ಚರ್ಚ್ ಸ್ಟ್ರೀಟ್ ಅಕ್ಯುಪೆಂಟ್ಸ್ ಅಸೋಸಿಯೇಷನ್‍ ನೊಂದಿಗೆ ಆಯೋಜಿಸಿದ್ದ ಚರ್ಚ್ ಸ್ಟ್ರೀಟ್‍ನಲ್ಲಿ ಭಾರತದ ಮೊಟ್ಟಮೊದಲ ‘ಸ್ವಚ್ಚ ವಾಯು ಸ್ಟ್ರೀಟ್ ಟೆಸ್ಟ್ ಬೆಡ್’ ಕಾರ್ಯಕ್ರಮವನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೆರವೇರಿಸಿದರು. ಈ ವೇಳೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಶಾಸಕ ಎನ್.ಎ. ಹ್ಯಾರಿಸ್, ಬಿ.ಬಿ.ಎಂ.ಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. : - - - -