ನ.4ರಿಂದ ಮದ್ದು-ಗುಂಡುಗಳ ವಾರ್ಷಿಕ ತರಬೇತಿ ಕಾರ್ಯಾಗಾರ: ಸಾಕು ಪ್ರಾಣಿ ಹಾಗೂ ಜನ ಸಂಚಾರಕ್ಕೆ ನಿರ್ಬಂಧ.. ಮೈಸೂರು,ನವೆಂಬರ್,2,2020(..):ನೈರುತ್ಯ ರೈಲ್ವೆ ಮೈಸೂರು ವಿಭಾಗದ ವತಿಯಿಂದ ನವೆಂಬರ್ 4 ರಿಂದ ಮೂರು ದಿನಗಳ ಕಾಲ ಮೊದಲ ಹಂತದ ಮದ್ದು-ಗುಂಡುಗಳ ವಾರ್ಷಿಕ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ರೈಲ್ವೆ ರಕ್ಷಣಾದಳ ಮೈಸೂರು ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಂದ ನವೆಂಬರ್ 4 ರಿಂದ ನವೆಂಬರ್ 6ರವರೆಗೆ ಮದ್ದು-ಗುಂಡುಗಳ ವಾರ್ಷಿಕ ತರಬೇತಿ ಕಾರ್ಯಾಗಾರವನ್ನು “ಪೋಲೀಸ್ ಫೈರಿಂಗ್ ರೇಂಜ್ ದೊಡ್ಡ ಬ್ಯಾಡರಹಳ್ಳಿ, ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸಿದೆ. ಈ ಹಿನ್ನೆಲೆ ಮೂರು ದಿನಗಳ ಕಾಲ ಈ ವ್ಯಾಪ್ತಿಯಲ್ಲಿ ಸಾಕು ಪ್ರಾಣಿ ಹಾಗೂ ಜನ ಸಂಚಾರವನ್ನು ನಿಷೇಧಿಸಲಾಗಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಜನಸಂಪರ್ಕಾಧಿಕಾರಿ ಪ್ರಿಯಾ ಶೆಟ್ಟಿ ಮನವಿ ಮಾಡಿದ್ದಾರೆ. : – -- - - -