ಮೈಸೂರು ಅರಮನೆ ಸುತ್ತ 144 ಸೆಕ್ಷೆನ್ ಜಾರಿ ಹಿನ್ನೆಲೆ : ಬಿಕೋ ಎನ್ನುತ್ತಿರುವ ನಗರ ಬಸ್ ನಿಲ್ದಾಣ…. ಮೈಸೂರು,ಅಕ್ಟೋಬರ್,26,2020(..): ಇಂದು ಸರಳ ದಸರಾ ಮಹೋತ್ಸವ ಆಚರಣೆ ಹಿನ್ನೆಲೆ ಅರಮನೆ ಸುತ್ತಲೂ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ನಗರದ ಹೃದಯ ಭಾಗಕ್ಕೆ ಬಸ್ ಗಳ ಪ್ರವೇಶಕ್ಕೂ ಅವಕಾಶ ನೀಡದ ಹಿನ್ನೆಲೆ ನಗರ ಬಸ್ ನಿಲ್ದಾಣ ಸ್ಥಬ್ದವಾಗಿದೆ. ನಗರದ ಹೃದಯ ಭಾಗಕ್ಕೆ ಬಸ್ ಗಳಿಗೂ ನೋ ಎಂಟ್ರಿ ನಿಲ್ದಾಣಕ್ಕೆ ಬರುವ ಎಲ್ಲ ಮಾರ್ಗಗಳು ಬಂದ್ ಮಾಡಿರುವ ಹಿನ್ನೆಲೆ ನಗರ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಅಗ್ರಹಾರ, ರಾಮಸ್ವಾಮಿ ಸರ್ಕಲ್, ದಾಸಪ್ಪ ಸರ್ಕಲ್, ಫೈಲಟ್ ಸರ್ಕಲ್, ಗನ್ ಹೌಸ್ ಬಳಿಯಿಂದಲೇ ಬಸ್ ಗಳ ಬೇರೆ ಮಾರ್ಗಗಳಲ್ಲಿ ಸಂಚರಿಸುತ್ತಿವೆ. : 144------ -