ಆನೆ ಚಲನವಲನ ಪಂಥ ಸಂರಕ್ಷಣೆ ಬಗ್ಗೆ ಅರಿವು : ಮೈಸೂರಿನಲ್ಲಿ ಸೈಕ್ಲೊಥಾನ್ ಗೆ ಚಾಲನೆ… ಮೈಸೂರು,ಅಕ್ಟೋಬರ್,6,2020(..):66 ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಐದನೇ ದಿನದ ಮೈಸೂರು ಮಾರ್ಗದ ಸೈಕ್ಲೊಥಾನ್ ಗೆ ಚಾಲನೆ ನೀಡಲಾಯಿತು. ವನ್ಯ ಜೀವಿ ಸಪ್ತಾಹ 2020 ಅಂಗವಾಗಿ ಆನೆ ಚಲನವಲನ ಪಂಥ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮೈಸೂರು ರಾಮನಗರದವರೆಗೆ ಸೈಕ್ಲೊಥಾನ್ ಆಯೋಜಿಸಲಾಗಿದ್ದು, ಮೈಸೂರಿನ ಅರಣ್ಯ ಭವನದಲ್ಲಿ ಆವರಣದಲ್ಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್ ರಾಮ್ ಸೈಕ್ಲೊಥಾನ್ ಗೆ ಚಾಲನೆ ನೀಡಿದರು. ವನ್ಯ ಜೀವಿ ಸಪ್ತಾಹ 2020 ಅಂಗವಾಗಿ ಆನೆ ಚಲನವಲನ ಪಂಥ ಸಂರಕ್ಷಣೆ ಬಗ್ಗೆ ಸೈಕಲ್ ಸವಾರರು ಸೈಕ್ಲೊಥಾನ್ ಮೂಲಕ ಅರಿವು ಮೂಡಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಿರಾಲಾಲ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಭಾಗಿಯಾಗಿದ್ದರು. : 66th - –- -