ಹೋರಾಟಗಾರರಿಗೆ ಜಯ ಶತಸಿದ್ಧ ಎಂಬುದು ಸಾಬೀತು-ಬಾಬ್ರಿ ಮಸೀದಿ ತೀರ್ಪು ಕುರಿತು ಸಿಎಂ ಬಿಎಸ್ ವೈ ಸಂತಸ… ಬೆಂಗಳೂರು, ಸೆಪ್ಟಂಬರ್,30,2020(..):ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ನಾಯಕ ಎಲ್.ಕೆ ಅಡ್ವಾಣಿ ಸೇರಿ ಎಲ್ಲಾ 32 ಆರೋಪಿಗಳನ್ನು ಖುಲಾಸೆಗೊಳಿಸಿ ಲಖನೌ ಸಿಬಿಐ ಕೋರ್ಟ್ ನೀಡಿದ ತೀರ್ಪನ್ನು ಸಿಎಂ ಬಿಎಸ್ ಯಡಿಯೂರಪ್ಪ ಸ್ವಾಗತಿಸಿದ್ದಾರೆ. ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ, ಹೋರಾಟಗಾರರಿಗೆ ಜಯ ಶತಸಿದ್ಧ ಎಂಬುದು ಸಾಬೀತಾಗಿದೆ. ಹೋರಾಟಗಾರರಗೆ ಎಂದಿಗೂ ಹಿನ್ನಡೆಯಾಗುವುದಿಲ್ಲ. ಇದು ಭಾರತವೇ ಒಪ್ಪುವಂತಹ ತೀರ್ಪಾಗಿದೆ ಎಂದು ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕಾರ್ಯ ಆರಂಭವಾಗಿದೆ. ಅಂದು ಎಲ್.ಕೆ ಅಡ್ವಾಣಿ ಅವರು ನಡೆಸಿದ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಈ ಯಶಸ್ಸಿಗೆ ಕಾರಣರಾದ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಹಾಗೂ ಉಮಾ ಭಾರತಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ನುಡಿದಿದ್ದಾರೆ. : –- -