ಮೈಸೂರಿನ ಗಾಯತ್ರಿಪುರಂ ಬಳಿ ವಿದ್ಯುತ್ ಕಂಬಕ್ಕೆ ಪೊಲೀಸ್ ವಾಹನ ಡಿಕ್ಕಿ ಮೈಸೂರು, ಸೆಪ್ಟೆಂಬರ್ 20, 2020 (..):ವಿದ್ಯುತ್ ಕಂಬಕ್ಕೆ ಪೊಲೀಸ್ ವಾಹನ ಡಿಕ್ಕಿ ಹೊಡೆದಿದೆ. ಮೈಸೂರಿನ ಗಾಯತ್ರಿಪುರಂ ಬಳಿ ವಿದ್ಯುತ್ ಕಂಬಕ್ಕೆ ಪೊಲೀಸ್ ವಾಹನ ಡಿಕ್ಕಿ ಸಂಭವಿಸಿದೆ. ಇದರ ರಭಸಕ್ಕೆ ವಿದ್ಯುತ್ ಕಂಬ ನೆಲಕ್ಕುರುಳಿದೆ. ಕಂಬಕ್ಕೆ ವಾಹನ ಡಿಕ್ಕಿ ಹೊಡೆಸಿ ಚಾಲಕ ಪರಾರಿಯಾಗಿದ್ದಾನೆ. ಕುಡಿದು ವಾಹನ ಚಾಲನೆ ಮಾಡಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ಬಂದ ಪೋಲಿಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು. ಪೊಲೀಸರೊಂದಿಗೆ ಸ್ಥಳೀಯರ ವಾಗ್ವಾದ ನಡೆಸಿದರು. ಇದು ನಜರ್ ಬಾದ್ ಪೊಲೀಸ್ ಠಾಣೆಗೆ ಸೇರಿದ ವಾಹನವಾಗಿದೆ.