ಪ್ರಶಾಂತ್ ಸಂಬರಗಿಯಷ್ಟು ಅವಿವೇಕಿ ಬೇರೆ ಯಾರು ಇಲ್ಲ : ನಿರ್ಮಾಪಕ ಕೆ.ಮಂಜು ಬೆಂಗಳೂರು,ಸೆಪ್ಟೆಂಬರ್,14,2020(..): ಸ್ವಂತ ಹಣದಲ್ಲಿ ಸಿನಿಮಾ ಮಾಡಿದ್ದೇನೆ. ಪ್ರಶಾಂತ್ ಸಂಬರಗಿ ಬೇರೆ, ಬೇರೆ ವ್ಯಾಪಾರವಿದೆ. ಸಂಬರಗಿಯಷ್ಟು ಅವಿವೇಕಿ ಬೇರೆ ಯಾರು ಇಲ್ಲ ಎಂದು ನಿರ್ಮಾಪಕ ಕೆ.ಮಂಜು ಕಿಡಿಕಾರಿದ್ದಾರೆ. ಪಾಪದ ಹಣದಲ್ಲಿ ಸಿನಿಮಾ ಮಾಡ್ತಾರೆ ಎಂಬ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರ ಆರೋಪಕ್ಕೆ ಕೆ.ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರರಂಗ ಯಾವುದೇ ತಪ್ಪು ಮಾಡುವುದಿಲ್ಲ. ಸ್ವಂತ ಹಣದಲ್ಲಿ ಸಿನಿಮಾ ಮಾಡಿದ್ದೇನೆ. ನಮಗೆ ಯಾವುದೇ ಭಯವಿಲ್ಲ. ನಾವು ಮನೆ, ಮಠ ಮಾರಿ ಸಿನಿಮಾ ಮಾಡುತ್ತೇವೆ. ನಾವು ಕ್ಲೀನ್ ಅಂಥ ಧೈರ್ಯವಾಗಿ ಹೇಳುತ್ತೇನೆ. ಸಂಬರಗಿ ಪಾಪದ ಹಣ ಮಾಡಿರಬೇಕು ಎಂದು ಕಿಡಿಕಾರಿದ್ದಾರೆ. : -- - .