ಸುತ್ತೂರು ಶ್ರಿ ಮಠ-ಗುರು ಪರಂಪರೆ ಅನಿಮೇಷನ್ ಚಿತ್ರ ಬಿಡುಗಡೆ ಮೈಸೂರು,ಆಗಸ್ಟ್,30, 2020(..): ಸುತ್ತೂರು ಶ್ರಿ ಮಠ-ಗುರು ಪರಂಪರೆ ಅನಿಮೇಷನ್ ಚಿತ್ರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೆನ್ನೆ ಬಿಡುಗಡೆ ಮಾಡಿದರು. ಸುತ್ತೂರು ಮಹಾಸಂಸ್ಥಾನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಜಗದ್ಗುರು ಶ್ರೀ ಸುತ್ತೂರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ 105ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಆನ್ಲೈನ್ ಮೂಲಕ ಅನಿಮೇಷನ್ ಚಿತ್ರ ಬಿಡುಗಡೆ ಮಾಡಿದರು. ಚಲನಚಿತ್ರ ಸಂಗೀತ ನಿರ್ದೇಶಕ ಮತ್ತು 2017ರ ವಿಜೇತ ಮೈಸೂರಿನ ಪ್ರತಿಭೆ ಹರಿಕಾವ್ಯ ರವರು ಸಂಗೀತ ನಿರ್ದೇಶನ ಮಾಡಿರುವ ಸುತ್ತೂರು ಶ್ರಿ ಮಠ-ಗುರು ಪರಂಪರೆ ಅನಿಮೇಷನ್ ಚಿತ್ರವು ವಿಶೇಷವಾಗಿ ಮೂಡಿಬಂದಿದೆ. ಸುತ್ತೂರು ಶ್ರಿ ಮಠ-ಗುರು ಪರಂಪರೆ ಒಟ್ಟಾರೆ ಚಿತ್ರಣವನ್ನು ಅನಿಮೇಷನ್ ಮೂಲಕ ತೋರಿಸುವ ನೂತನ ಪ್ರಯತ್ನವಾಗಿದೆ. : -------