ಎರಡು ವರ್ಷದಿಂದ ದೇವರಾಜ್ ಅರಸು ಪ್ರಶಸ್ತಿ ನೀಡದಿರುವುದನ್ನು ಖಂಡಿಸಿ ಪ್ರತಿಭಟನೆ ಮೈಸೂರು, ಆಗಸ್ಟ್, 20, 202(..): ಎರಡು ವರ್ಷದಿಂದ ದೇವರಾಜ್ ಅರಸು ಪ್ರಶಸ್ತಿ ನೀಡದಿರುವುದನ್ನು ಖಂಡಿಸಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿದರು. ನಗರದ ಕಲಾಮಂದಿರದ ಮುಂಭಾಗ ಗುರುವಾರ ಜಮಾವಣೆಗೊಂಡ ಪ್ರತಿಭಟನಾಕಾರರು ಸರಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು. ವೇದಿಕೆಯ ರಾಜ್ಯಾಧ್ಯಕ್ಷ ಕೆ.ಶಿವರಾಮ್ ಮಾತನಾಡಿ, ಹಿಂದುಳಿದ ವರ್ಗಗಲ ಹರಿಕಾರ ದೇವರಾಜ್ ಅರಸು ಅವರ ಪ್ರಶಸ್ತಿ ನೀಡದ ಸರಕಾರದ ಕ್ರಮವನ್ನು ಖಂಡಿಸಿದರು. ಅರಸು ಅವರ ಸಾಧನೆ ಅಪಾರವಾಗಿದ್ದು, ಸರಕಾರವು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವುದನ್ನು ಮುಂದುವರಿಸುವ ಮೂಲಕ ಗೌರವಿಸಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದರು. ಪ್ರತಿಭಟನೆಗೆ ಹುಣಸೂರು ಶಾಸಕ ಮಂಜುನಾಥ್ ಸಾಥ್ ನೀಡಿದರು. : – – - -