ಕೆಲಸ ಹೋಗುತ್ತೆಂದು ಹೆದರಿ ಪತ್ನಿ ಮಗಳಿಗೆ ವಿಷ ಹಾಕಿ ನಂತರ ತಾನೂ ನೇಣಿಗೆ ಶರಣಾದ ಖಾಸಗಿ ಕಂಪನಿ ನೌಕರ… ದಾರವಾಢ,ಜು,25,2020(..): ಕೊರೋನಾ ಹಿನ್ನೆಲೆ ಕೆಲಸ ಹೋಗುತ್ತದೆ ಎಂದು ಹೆದರಿ ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಮಗಳಿಗೆ ವಿಷ ಹಾಕಿ ನಂತರ ತಾನೂ ನೇಣಿಗೆ ಶರಣಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಮೆಹಬೂಬ್ ನಗರದಲ್ಲಿ ಈ ಘಟನೆ ನಡೆದಿದೆ. ಮೌನೀಶ್(36), ಪತ್ನಿ ಅರ್ಪಿತಾ(28), 2 ವರ್ಷದ ಸುಕೃತ ಮೃತಪಟ್ಟವರು. ಮೌನೀಶ್ ಪತ್ತಾರ್ ರೋಣ ತಾಲ್ಲೂಕಿನ ಅಸೋಟೆ ನಿವಾಸಿಯಾಗಿದ್ದು ಮಾರ್ಕೋಪೋಲೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೊರೋನಾ ಹಿನ್ನೆಲೆ ನೌಕರರನ್ನ ಕೆಲಸದಿಂದ ತೆಗೆಯಲು ಕಂಪನಿ ನಿರ್ಧರಿಸಿತ್ತು ಎನ್ನಲಾಗಿದೆ. ಹೀಗಾಗಿ ಉದ್ಯೋಗ ವೇತನ ಕಡಿತಕ್ಕೆ ಹೆದರಿ ಮೌನೀಶ್ ತನ್ನ ಪತ್ನಿ ಹಾಗೂ ಪುತ್ರಿಗೆವಿಷ ನೀಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : -- --