: ಕಳ್ಳಸಾಗಣೆ ಮಾಡಿದ್ದು ಚಿನ್ನಕಾಗಿಯಲ್ಲ, ಭಯೋತ್ಪಾಧಕ ಕೃತ್ಯಕ್ಕೆ : ಎನ್.ಐ.ಎ ಕೇರಳ, ಜು.13, 2020 : (.. ) ಕಳ್ಳಾಸಾಗಣೆ ಮಾಡಿದ್ದು ಚಿನ್ನಕ್ಕಾಗಿ ಅಲ್ಲ, ಬದಲಿಗೆ ಭಯೋತ್ಪಾಧಕ ಕೃತ್ಯಕ್ಕೆ ಎಂದು ಎನ್.ಐ.ಎ ನ್ಯಾಯಾಲಯಕ್ಕೆ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ. ಬೆಂಗಳೂರಿನ ಬಿಟಿಎಂ ಲೇಔಟ್ ನಿಂದ ಆರೋಪಿಗಳಾ ಸ್ವಪ್ನಾ ಸುರೇಶ್ ಹಾಗೂ ಸಂದೀಪ್ ನಾಯರ್ ರನ್ನು ಬಂಧಿಸಿದ ಎನ್.ಐ.ಎ ತಂಡ ಕೇರಳದಲ್ಲಿ ನ್ಯಾಯಾಧೀಶರ ಎದುರು ಹಾಜರು ಪಡಿಸಿತು. ಈ ವೇಳೆ, ಚಿನ್ನ ಕಳ್ಳಸಾಗಣೆ ಪ್ರಕರಣದ 2 ನೇ ಮತ್ತು 4 ನೇ ಆರೋಪಿಗಳಾದ ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ ಅವರನ್ನು ವಿಚಾರಣೆಗೆ ಪೂರಕವಾಗಿ ಒಂದು ವಾರಗಳ ಕಾಲ ಎನ್ಐಎ, ಇಂಡಿಯಾ ಕಸ್ಟಡಿಯಲ್ಲಿರಿಸಲು ಕೋರ್ಟ್ ಸೂಚಿಸಿತು. ಬೆಂಗಳೂರಿನಲ್ಲಿ ಎನ್ಐಎ ವಶಕ್ಕೆ ತೆಗೆದುಕೊಂಡಿದ್ದ ನಾಯರ್ ಬ್ಯಾಗ್ ಅನ್ನು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಪರಿಶೀಲಿಸಲಾಗಿತು. ಈ ವೇಲೆ ಆರೋಪಿಗಳು ಚಿನ್ನವನ್ನು ಜ್ಯುವೆಲ್ಲರಿಗಾಗಿ ಅಲ್ಲ, ಭಯೋತ್ಪಾದನೆಗಾಗಿ ಕಳ್ಳಸಾಗಣೆ ಮಾಡಿದ್ದರು ಎಂಬ ಅಂಶವನ್ನು ಎನ್ಐಎ ನ್ಯಾಯಾಲಯದ ಗಮನಕ್ಕೆ ತಂದಿತು ಎಂದು ಮೂಲಗಳು ತಿಳಿಸಿವೆ. : ------- : 2nd,4th NIA_India . ’ , NIA_India . -