ಬೆಂಗಳೂರಿನಲ್ಲಿ‌ ಹಾಪ್’ಕಾಮ್ಸ್ ಮಳಿಗೆಗೆ ಸಚಿವ ನಾರಾಯಣಗೌಡ ಭೇಟಿ, ಪರಿಶೀಲನೆ ಬೆಂಗಳೂರು, ಏಪ್ರಿಲ್ 16, 2020 (.): ಹಾಪ್ ಕಾಮ್ಸ್ ಮಳಿಗೆಗೆ ದಿಢೀರ್ ಭೇಟಿ ನೀಡಿದ ಸಚಿವ ಡಾ. ನಾರಾಯಣ ಗೌಡ ಭೇಟಿ ಪರಿಶೀಲನೆ ನಡೆಸಿದರು. ಇಂದು ರಾತ್ರಿ ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಪ್ ಕಾಮ್ಸ್ ಮಳಿಗೆಯಲ್ಲಿ ಹಣ್ಣು, ತರಕಾರಿ ವಹಿವಾಟು ವಿವರ ಪರಿಶೀಲಿಸಿದ ಸಚಿವರು ಸಿಬ್ಬಂದಿ‌ ಜತೆ ಮಾತುಕತೆ ನಡೆಸಿದರು. ಬೆಂಗಳೂರಿನ ಆರ್ ಎಂ ವಿ ಬಡಾವಣೆಯಲ್ಲಿರುವ ಹಾಪ್ ಕಾಮ್ಸ್ ಮಳಿಗೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಕೋವಿಡ್ -19 ಹಿನ್ನೆಲೆಯಲ್ಲಿ ನೀಡಿರುವ ಮಾರ್ಗ ಸೂಚಿ ಪಾಲನೆ ಆಗಬೇಕು ಎಂದು ಹಾಪ್ ಕಾಮ್ಸ್ ಮಳಿಗೆ ಸಿಬ್ಬಂದಿಗೆ ಖಡಕ್ ಸೂಚನೆ ನೀಡದರು.