ಸಿಎಂ ಎದುರೇ ಬಚ್ಚೇಗೌಡ ವಿರುದ್ಧ ಕಿಡಿಕಾರಿದ ಎಂಟಿಬಿ ನಾಗರಾಜ್ ಬೆಂಗಳೂರು, ಡಿಸೆಂಬರ್ 12, 2019 (..):ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಎದುರು ಬಚ್ಚೇಗೌಡ ವಿರುದ್ಧ ಕಿಡಿ ಕಾರಿದ ಎಂಟಿಬಿ ನಾಗರಾಜ್ ಕಿಡಿಕಾರಿದ್ದಾರೆ. ಇಂದು ಡಾಲರ್ಸ್ ಕಾಲನಿಯ ಸಿಎಂ ಯಡಿಯೂರಪ್ಪನಿವಾಸದಲ್ಲಿ ಭೇಟಿಯಾದ ಎಂಟಿಬಿ ನಾಗರಾಜ್ ಬಚ್ಚೇಗೌಡ ವಿರುದ್ಧ ಕಿಡಿಕಾರಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲಿ ಸೋತ ನಂತರ ಮೊದಲ ಸಲ ಸಿಎಂ ಭೇಟಿ ಮಾಡಿ ಚರ್ಚಿಸಿದ್ದಾರೆ. ಸೋಲಿನ ಕಾರಣಗಳನ್ನು ಸಿಎಂಗೆ ವಿವರಿಸಿದ ಎಂಬಿಟಿ ನಾಗರಾಜ್, ಬೇಸರ, ದು:ಖದಲ್ಲೇ ಸಿಎಂ ಜತೆ ಅಳಲು ತೋಡಿಕೊಂಡರು. ಸಂಸದ‌ ಬಚ್ಚೇಗೌಡರ ವಿರುದ್ಧ ದೂರಿನ ಸುರಿಮಳೆಗೈದರು.