ರಂಭಾಪುರಿ ಶ್ರೀಗಳ ವಿರುದ್ದ ಭಕ್ತರ ಪ್ರತಿಭಟನೆ: ಕಾರಿಗೆ ಚಪ್ಪಲಿ ತೂರಿದ ಮಹಿಳೆ. ಬಾಗಲಕೋಟೆ,ಫೆಬ್ರವರಿ,17,2024(..):ಬಾಳೆ ಹೊನ್ನೂರು ಮಠದ ರಂಭಾಪುರಿ ಶ್ರೀಗಳ ವಿರುದ್ದ ಭಕ್ತರು ಪ್ರತಿಭಟನೆ ನಡೆಸಿದ್ದು ಮಹಿಳೆಯೊಬ್ಬರು ಕಾರಿಗೆ ಚಪ್ಪಲಿ ತೂರಿದ ಘಟನೆ ಬಾಗಲಕೋಟೆ ತಾಲ್ಲೂಕು ಕಲಾದಗಿಯಲ್ಲಿ ನಡೆದಿದೆ. ಗುರುಲಿಂಗೇಶ್ವರ ಪೀಠಾಧಿಪತಿ ಆಯ್ಕೆವಿವಾದ ಜಮೀನು ವಿವಾದ ಹೈಕೋರ್ಟ್ ನಲ್ಲಿದ್ದು, ಗಂಗಾಧರ ಸ್ವಾಮೀಜಿಯಿಂದ ಹೊಲದ ಉಳಿಮೆಗೆ ಮಠದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ರಂಭಾಪುರಿ ಶ್ರೀಗಳು ತೆರಳುತ್ತಿದ್ದ ಕಾರನ್ನ ಭಕ್ತರು ಅಡ್ಡಗಟ್ಟಲು ಯತ್ನಿಸಿದ್ದು ಈ ವೇಳೇ ಭಕ್ತರ ನಡುವೆ ತಳ್ಳಾಟ ನೂಕಾಟ ನಡೆದಿದೆ. ಈ ಸಮಯದಲ್ಲಿ ಮಹಿಳೆಯೊಬ್ಬರು ರಂಬಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ತೂರಿದ್ದಾರೆ ಎನ್ನಲಾಗಿದೆ. : –- -