ಚಿರತೆ ದತ್ತು ನವೀಕರಿಸಿದ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ.. ಮೈಸೂರು,ಸೆ,5,2019(..): ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯಾದ ವೇದಾ ಕೃಷ್ಣಮೂರ್ತಿ ಅವರು ಮೃಗಾಲಯದ ಒಂದು ಚಿರತೆಯ ದತ್ತು ನವೀಕರಿಸಿದ್ದಾರೆ. ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಭಾವನ ಎಂಬ ಚಿರತೆಯನ್ನು ದತ್ತು ಕಳೆದ ವರ್ಷ ದತ್ತು ಸ್ವೀಕಾರಿಸಿದ್ದರು. ಇಂದು ಮೃಗಾಲಯಕ್ಕೆ ಆಗಮಿಸಿದ‌ ವೇದ ಕೃಷ್ಣಮೂರ್ತಿ 2019 ರಿಂದ 2020ರ ವರೆಗೆ 35ಸಾವಿರ ರೂ.ಚೆಕ್ ನೀಡಿ ದತ್ತುವನ್ನು ನವೀಕರಣ ಮಾಡಿಸಿಕೊಂಡಿದ್ದಾರೆ. ಮೃಗಾಲಯದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಜಿತ್ ಕುಲಕರ್ಣಿ ಅವರು ಅಭಿನಂದಿಸಿದ್ದಾರೆ. : - – – - -