‘ರೈಲ್ವೆ ನಿಲ್ದಾಣ’ದ ಸಿಂಗರ್’ಗೆ ಬಾಲಿವುಡ್ ಆಫರ್, ಬದಲಾದ ಅದೃಷ್ಟ ! ! ಬೆಂಗಳೂರು, ಆಗಸ್ಟ್ 23, 2019 (..): ಕೆಲ ದಿನಗಳ ಹಿಂದಷ್ಟೆ ಲತಾ ಮಂಗೇಶ್ಕರ್ ಹಾಡು ಹಾಡಿ ಪ್ರಸಿದ್ಧಿಗೆ ಬಂದಿರುವ ರಾನು ಅದೃಷ್ಟ ಬದಲಾಗಿದೆ. ಲ್ವೆ ನಿಲ್ದಾಣದಲ್ಲಿ ಹಾಡಿ, ಎಲ್ಲರ ಮೆಚ್ಚುಗೆ ಗಳಿಸಿದ್ದ ರಾನು ಅವರ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈಗ ಅವರ ಅದೃಷ್ಟ ಬದಲಾಗಿದೆ. ಬಾಲಿವುಡ್ ಸಿನಿಮಾದಲ್ಲಿ ಹಾಡುವ ಅವಕಾಶ ಸಿಕ್ಕಿದೆ. ಹಿಮೇಶ್ ರೇಶಮಿಯಾ ತನ್ನ ಹೊಸ ಚಿತ್ರದ ಹಾಡೊಂದನ್ನು ಹಾಡಲು ಅವಕಾಶ ನೀಡಿದ್ದಾರೆ. ಹಿಮೇಶ್ ಜೊತೆಗಿರುವ ವಿಡಿಯೋ ವೈರಲ್ ಆಗಿದೆ. ಇದ್ರಲ್ಲಿ ರಾನು, ಮಾಂತ್ರಿಕ ಧ್ವನಿಯಲ್ಲಿ ಹಾಡ್ತಿದ್ದಾರೆ. ತೇರಿ ಮೇರಿ ಕಹಾನಿ ಈ ಹಾಡು ಮುಂದಿನ ಚಿತ್ರ ಹ್ಯಾಪಿ ಹಾರ್ಡ್ ಆಯಂಡ್ ಹೀರ್ ಚಿತ್ರದ್ದು ಎಂದು ರೇಶಮಿಯಾ ಹೇಳಿದ್ದಾರೆ. ಇಷ್ಟೇ ಅಲ್ಲ ರಾನು, ಸೂಪರ್ ಸ್ಟಾರ್ ಸಿಂಗರ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ.