ಟಿ. ನರಸೀಪುರದ ತಿರುಮಕೂಡ್ಲು ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮೈಸೂರು,ಆ,11,2019(..): ಕಾವೇರಿ ಹಾಗೂ ಕಪಿಲಾ ನದಿಗಳ ಸಂಗಮ ನರಸೀಪುರದ ತಿರುಮಕೂಡ್ಲು ಕ್ಷೇತ್ರಕ್ಕೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ಭೇಟಿ ನೀಡಿದರು. ನರಸೀಪುರದ ತಿರುಮಕೂಡ್ಲು ಕ್ಷೇತ್ರಕ್ಕೆ ವಾಟಾಳ್ ನಾಗರಾಜು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಬಳಿಕ ಮಾತನಾಡಿದ ಅವರು, ಐತಿಹಾಸಿಕವಾದ ಸ್ಥಳ ಪುರಾಣ ಪ್ರಸಿದ್ಧ ವಾದತಂಹ ದೇವಸ್ಥಾನಗಳು ಇವೆ. ಇಲ್ಲಿಗೆ ಕೋಟಿ ಕೋಟಿ ಜನ ಬಂದು ಹೋಗುವಂತಹ ಸ್ಥಳ. ಈ ಸ್ಥಳದಲ್ಲಿ ಸುಮಾರು 35 ವರ್ಷದ ಹಿಂದೆ ಈ ರೀತಿ ಪ್ರವಾಹ ಬಂದಿತ್ತು ಎನ್ನುವ ಮಾತು ಇದೆ. ಈ ಸ್ಥಳವನ್ನು ನಾನು ನೋಡಿ ಪರಿಶೀಲಿಸಿದ್ದೇನೆ. ಸರ್ಕಾರ ಈ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ನೆರವು ನೀಡಬೇಕೆಂದು ಒತ್ತಾಯಿಸುತ್ತೇನೆ ಎಂದರು. : - — – -