ಪತ್ನಿ ಸಮೇತ ಚಾಮುಂಡಿಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ರಾಜವಂಶಸ್ಥ ಯದುವೀರ್… ಮೈಸೂರು,ಜು,24,2019(..): ಚಾಮುಂಡೇಶ್ವರಿ ವರ್ಧಂತಿ ಹಿನ್ನೆಲೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಪತ್ನಿ ಸಮೇತ ಆಗಮಿಸಿ ಯುದುವೀರ್ ಅವರು ಚಾಮುಂಡಿ ತಾಯಿ ದರ್ಶನ ಪಡೆದರು. ಯದುವೀರ್ ಅವರು ಶ್ವೇತವರ್ಣದ ರಾಜ ಪೋಷಾಕಿನಲ್ಲಿ ರಾರಾಜಿಸಿದರು. ಇಂದು 10.30ಕ್ಕೆ ಚಿನ್ನದ ಪಲ್ಲಕ್ಕಿ ಉತ್ಸವಕ್ಕೆ ಯದುವೀರ್ ಚಾಲನೆ ನೀಡಲಿದ್ದಾರೆ. ಇಂದು ತಾಯಿ ಚಾಮುಂಡೇಶ್ವರಿಯ ಜನ್ಮದಿನವಾಗಿದ್ದು ಭಕ್ತಸಾಗರವೇ ಚಾಮುಂಡಿ ಬೆಟ್ಟಕ್ಕೆ ಹರಿದು ಬರಲಿದೆ. : – - – - - .