ಸಂತೋಷದಿಂದ ನಾನು ಸಿಎಂ ಸ್ಥಾನ ತ್ಯಜಿಸಲು ಸಿದ್ಧ- ವಿಧಾನಸಭೆಯಲ್ಲಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಘೋಷಣೆ.. ಬೆಂಗಳೂರು,ಜು,23,2019(..): ಸಂತೋಷದಿಂದ ನಾನು ಸಿಎಂ ಸ್ಥಾನ ತ್ಯೆಜಿಸಲು ಸಿದ್ಧನಿದ್ದೇನೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ವಿಶ್ವಾಸಮತಯಾಚನೆಗೆ ಇಂದು 6 ಗಂಟೆಗೆ ಡೆಡ್ ನೈನ್ ನೀಡಲಾಗಿತ್ತು. ವಿಶ್ವಾಸಮತಯಾಚನೆಗೆ ಮ್ಯಾಜಿಕ್ ನಂಬರ್ 103 ಆಗಿದೆ. ಸಮ್ಮಿಶ್ರ ಸರ್ಕಾರಕ್ಕೆ ಸಂಖ್ಯಬಲ ಇಲ್ಲ. ಮ್ಯಾಜಿಕ್ ನಂಬರ್ 103 ಆಗಿದ್ದು ಸಮ್ಮಿಶ್ರ ಸರ್ಕಾರಲ್ಲಿ 100 ಸ್ಥಾನ ಬಿಜೆಪಿಗೆ 105 ಸ್ಥಾನವಿದೆ. ಹೀಗಾಗಿ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಾನು ಸಂತೋಷದಿಂದ ಸಿಎಂ ಸ್ಥಾನ ತ್ಯೆಜಿಸಲು ಸಿದ್ಧನಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಿಷ್ಟು… ಕಳೆದ ಗುರುವಾರ ವಿಶ್ವಾಸಮತಯಾಚನೆ ಪ್ರಸ್ತಾಪ ಮಂಡಿಸಿದ್ದೇನೆ. ಆದರೆ ಚರ್ಚೆಯಲ್ಲಿ ಪ್ರತಿಪಕ್ಷದ ನಾಯಕರು ಭಾಗವಹಿಸಿಲ್ಲ. ವಿಶ್ವಾಸಮತ ನಿರ್ಣಯದ ಬಗ್ಗೆ ವಿಪಕ್ಷದವರ ಚರ್ಚೆಯಿಲ್ಲ. ಇದು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲು. . ನಾಡಿನ ಜನತೆ ಕ್ಷಮಿಸಲಾರರೆಂಬ ಚಿಂತೆಯಲ್ಲಿದ್ದೇನೆ. ಸಿಎಂ ಕುರ್ಚಿಗೆ ಅಂಟಿಕೊಂಡು ಕೂರಿದ್ದಾರೆ ಎಂದು ಚರ್ಚೆಯಾಗುತ್ತಿದೆ. ನನ್ನ ನಡವಳಿಕೆ ಬಗ್ಗೆ ಸದನದಲ್ಲಿ ನಡೆಯುವ ಸನ್ನಿವೇಶ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸ್ಪೀಕರ್ ಅವರನ್ನು ಚರ್ಚೆಗೆ ಎಡೆ ಮಾಡಿಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ವಿಶ್ವಾಸಮತಯಾಚನೆಯನ್ನ ಅದಷ್ಟು ಮುಗಿಸುತ್ತಿಲ್ಲವೆಂದು ವಿಪಕ್ಷದವರು ಬೇಸರಗೊಂಡಿದ್ದಾರೆ. ಕೆ.ಜಿ ಬೋಪಯ್ಯ ಪದೇ ಪದೇ ನಾವು ನೆನಪಸಿಕೊಳ್ಳುತ್ತೇವೆ. ಸ್ಪೀಕರ್ ಆಗಿ ಅಂದು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು. ಬಿಜೆಪಿಯಿಂದ ದುರ್ಬಳಕೆ ಮಾಡಿಕೊಂಡಿದ್ದರು . ವಿಶ್ವಾಸಮತಯಾಚನೆಗೆ ಸಮಯ ತೆಗೆದುಕೊಂಡಿದ್ದೇವೆ. ಇದರಿಂದ ನಿಮಗೂ ವಿಪಕ್ಷದವರೆಗೂ ಬೇಸರವಾಗಿರಬಹುದು. ಸ್ವಾರ್ಥವಿರಬಹುದು ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು. .. ’ 10 . , . . . . . ’ . ’ ’ . . . ’ . , . . : . ’ , ’ . , . ’ , ’ , . ’ . ’ , ’ . ’ ’ . : - - – - -