ಸ್ಪೀಕರ್ ಕಚೇರಿ ಬಳಿ ಬಿಜೆಪಿ ಶಾಸಕರಿಗೆ ಶುಭ ಹಾರೈಸಿದ ಮಾಜಿ ಸಿಎಂ ಸಿದ್ದರಾಮಯ್ಯ.. ಬೆಂಗಳೂರು,ಜು.23,2019(..): ವಿಶ್ವಾಸಮತಯಾಚನೆ ನಡೆಸುವುದನ್ನೇ ಕಾಯುತ್ತಾ ಕುಳಿತಿರುವ ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ. ಹೌದು ಇಂದು ಬೆಳಿಗ್ಗೆ ಸ್ಪೀಕರ್ ರಮೇಶ್ ಕುಮಾರ್ ಕಚೇರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತೆರಳುತ್ತಿದ್ದ ವೇಳೇ ಬಿಜೆಪಿ ಶಾಸಕರಾದ ಎಸ್.ಆರ್.ವಿಶ್ವನಾಥ್ ಹಾಗೂ ಸುನೀಲ್‍ಕುಮಾರ್ ಅಲ್ಲಿಂದ ವಾಪಸ್ ಆಗಿತ್ತಿದ್ದರು. ಈಸಮಯದಲ್ಲಿ ಇಬ್ಬರು ಪರಸ್ಪರ ಮುಖಾಮುಖಿಯಾಗಿದ್ದು ಈ ವೇಳೆ ಸಿದ್ದರಾಮಯ್ಯ ಅವರಿಗೆ ವಿಶ್ ಮಾಡಿದರು. ಇಬ್ಬರು ಬಿಜೆಪಿ ಶಾಸಕರಿಗೂ ಶುಭಹಾರೈಸಿದ ಸಿದ್ದರಾಮಯ್ಯ ಗುಡ್ ಲಕ್ ಎಂದು ಹೇಳಿದರು. ಈ ಮೂಲಕ ಆಕಸ್ಮಿಕವಾಗಿ ಇಬ್ಬರೂ ಶಾಸಕರು ಎದುರಾದ ವೇಳೆ ಸಿದ್ದರಾಮಯ್ಯ ಸೌಹಾರ್ದಯುತವಾಗಿ ಶುಭ ಹಾರೈಸಿದ್ದಾರೆ. : - - - -’ .