ಇಂದು ಸಂಜೆ ವೇಳೆಗೆ ವಿಶ್ವಾಸಮತ ಪ್ರಕ್ರಿಯೆ ಮುಕ್ತಾಯ- ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ…. ಬೆಂಗಳೂರು,ಜು,23,2019(..): ಇಂದು ಸಂಜೆ ವೇಳೆಗೆ ವಿಶ್ವಾಸಮತಯಾಚನೆ ಪ್ರಕ್ರಿಯೆ ಮುಗಿಸುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಅತೃಪ್ತ ಶಾಸಕರು ಸದನಕ್ಕೆ ಬರದಿರುವುದು ಅವರಿಷ್ಟ. ತಿಳುವಳಿಕೆ ಕೊರತೆಗೆ ನಾನೇನು ಮಾಡಲು ಆಗಲ್ಲ. ರಾಜೀನಾಮೆ ಹೇಗೆ ಕೊಡಬೇಕು ಎಂಬುದು ಗೊತ್ತಿಲ್ಲ. ಸ್ಪೀಕರ್ ಏಕೆ ನೋಟೀಸ್ ಕೊಡುತ್ತಾರೆ ಎಂಬ ಪ್ರಜ್ಞೆ ಬೇಡವಾ..? ಸುಮ್ಮನೆ ಶಾಸಕರಾಗಿ ಮೆರೆಯೋಕೆ ಬರ್ತಾರೆ ಎಂದು ಕಿಡಿಕಾರಿದರು. ಹಾಗೆಯೇ ಇಂದಿನ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ನಾನೇನು ಹೇಳಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು. : – - - -