ಬಿಜೆಪಿ ಮೂವರು ನಾಯಕರು ನಮ್ಮ ಮನೆಗೆ ಬಂದು 5 ಕೋಟಿ ಕೊಟ್ಟಿದ್ದಾರೆ- ವಿಧಾನಸಭೆಯಲ್ಲಿ ಶಾಸಕ ಶ್ರೀನಿವಾಸ್ ಗೌಡ ಆರೋಪ… ಬೆಂಗಳೂರು,ಜು,19,2019(..): ಬಿಜೆಪಿ ಮುಖಂಡರಾದ ಅಶ್ವತನಾರಾಯಣ್ ಯೋಗೇಶ್ವರ್ ಎಸ್ ಆರ್ ವಿಶ್ವನಾಥ್ ನಮ್ಮ ಮನೆಗೆ ಬಂದು 5 ಕೋಟಿ ಕೊಟ್ಟಿದ್ದರು ಎಂದು ಶಾಸಕ ಕೆ. ಶ್ರೀನಿವಾಸ್ ಗೌಡ ಆರೋಪಿಸಿದ್ದಾರೆ. ವಿಧಾನಸಭೆಯಲ್ಲಿ ಇಂದು ಮಾತನಾಡಿದ ಶಾಸಕ ಕೆ.ಶ್ರೀನಿವಾಸ್ ಗೌಡ, ಮೂವರು ಬಿಜೆಪಿ ನಾಯಕರು ನಮ್ಮ ಮನೆಗೆ ಬಂದಿದ್ದರು ನನ್ನ ಮನೆಗೆ ಬಂದು 5 ಕೋಟಿ ಕೊಟ್ಟಿದ್ದರು. ನಾನು ಆತರ ಅಲ್ಲ ಎಂದು ಹೇಳಿದ್ದೆ. ಆದರೂ 5 ಕೋಟಿ ಹಣ ನಮ್ಮ ಮನೆಯಲ್ಲಿ ಇಟ್ಟು ಹೋಗಿದ್ದರು. ಎಂದು ತಿಳಿಸಿದರು. ಈ ಕುರಿತು ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ ಈ ಆರೋಪಕ್ಕೆ ಕೇಸ್ ದಾಖಲಿಸಿ ಸೂಚನೆ ನೀಡಿದರು. : – - 5 - -