ಕೇಂದ್ರ ಬಜೆಟ್‌ ಇಂದು: ನಿರ್ಮಲಾ ಸೀತಾರಾಮನ್‌ ಮೇಲೆ ನಿರೀಕ್ಷೆಗಳ ಭಾರ ನವದೆಹಲಿ:ಜುಲೈ-5: ಕಳೆದ ಐದು ವರ್ಷಗಳ ಅವಧಿಯಲ್ಲೇ ಅತ್ಯಂತ ಕೆಳಮಟ್ಟಕ್ಕೆ ಕುಸಿದಿರುವ ಆರ್ಥಿಕತೆಯನ್ನು ಸಮತೋಲನಕ್ಕೆ ತರುವ ಮಹತ್ವದ ಜವಾಬ್ದಾರಿಯನ್ನು ಹೊತ್ತು ಮೊದಲ ಬಜೆಟ್‌ ಮಂಡಿಸಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಮೇಲೆ ನಿರೀಕ್ಷೆಗಳ ಭಾರ ಹೆಚ್ಚಿದೆ. ಬಜೆಟ್‌ ಮಂಡಿಸುವ ನಿರೀಕ್ಷೆ ಇದೆಯಾದರೂ ಜನಸಾಮಾನ್ಯರಿಗೆ ವರಮಾನ ತೆರಿಗೆ ವಿನಾಯಿತಿಯೂ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳ ಕಡೆಗೆ ಕಣ್ಣಿದೆ. ಭರ್ಜರಿ ಬಹುಮತದೊಂದಿಗೆ 2ನೇ ಬಾರಿ ಅಧಿಕಾರಕ್ಕೇರಿರುವ ಮೋದಿ ಸರಕಾರದ 2ನೇ ಅವಧಿಯ ಮೊದಲ ಬಜೆಟ್‌ ಇದಾಗಿದ್ದು, ಆರ್ಥಿಕ ಸುಸ್ಥಿರತೆ ಮತ್ತು ಅಭಿವೃದ್ಧಿಯೇ ಮೇಲುಗೈ ಸಾಧಿಸುವುದು ಖಚಿತವಾಗಿದೆ. ಬಜೆಟ್‌ ಮಂಡನೆ ಮುಕ್ತಾಯವಾಗುತ್ತಿದ್ದಂತೆಯೇ ಸರಕಾರದ ಅಧಿಕೃತ ವೆಬ್‌ಸೈಟ್‌ಲ್ಲಿ ಬಜೆಟ್‌ ಪ್ರತಿ ಲಭ್ಯ ಎಷ್ಟು ಹೊತ್ತಿಗೆ? ಬೆಳಗ್ಗೆ 11 ಗಂಟೆಗೆ ಆದ್ಯತೆಯ ಕ್ಷೇತ್ರಗಳುರೈತರ ಆದಾಯ ದ್ವಿಗುಣಕ್ಕೆ ಕ್ರಮಆಟೊಮೊಬೈಲ್‌, ಮೂಲ ಸೌಕರ್ಯಉದ್ಯೋಗ ವೃದ್ಧಿ, ಕೈಗಾರಿಕಾ ಉತ್ಪಾದನೆ ಪ್ರಮುಖ ಸವಾಲುಗಳು* ರಸ್ತೆ, ರೈಲ್ವೆ ಸೇರಿದಂತೆ ಮೂಲಸೌಕರ್ಯ ವಲಯ ನಿಧಾನಗತಿಯಲ್ಲಿದ್ದು (5.8%) ಅದಕ್ಕೆ ಉತ್ತೇಜನ ಅನಿವಾರ್ಯವಾಗಿದೆ.* ಅಮೆರಿಕ-ಚೀನಾ ವಾಣಿಜ್ಯ ಸಮರ ಮತ್ತಿತರ ಜಾಗತಿಕ ಕಾರಣಗಳಿಂದ ಬಿದ್ದ ಹೊಡೆತದಿಂದ ಆರ್ಥಿಕತೆಯನ್ನು ಮೇಲೆತ್ತುವುದು.* ಸಂಕಷ್ಟದಲ್ಲಿರುವ ಬ್ಯಾಂಕ್‌ಗಳಿಗೆ ಆರ್ಥಿಕ ಸಹಾಯ ನೀಡಿ ಪಾರು ಮಾಡುವುದು.* ಜಿಎಸ್‌ಟಿ ಸಂಗ್ರಹ ಪ್ರಮಾಣ ನಿರೀಕ್ಷೆಯಷ್ಟು ಆಗದೆ ಇರುವುದರಿಂದ ಸಮಸ್ಯೆಯಾಗಿದೆ.* ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಗೆ 75,000 ಕೋಟಿಯಿಂದ 90000 ಕೋಟಿ ರೂ. ಮೀಸಲು* ಈ ಬಾರಿ ಮಾನ್ಸೂನ್‌ ಮಂದಗತಿ, ಕೊರತೆಯಿಂದ ಕೃಷಿ ಚಟುವಟಿಕೆಗೆ ಭಾರಿ ಅಪಾಯ ಸಾಧ್ಯತೆ.ಕೃಪೆ:ವಿಜಯವಾಣಿ--------