ಕಾಂಗ್ರೆಸ್ ಮೈತ್ರಿಯೇ ದೇವೇಗೌಡರ ಸೋಲಿಗೆ ಕಾರಣ: ತುಮಕೂರು ಜೆಡಿಎಸ್’ನಲ್ಲಿ ಅಸಮಾಧಾನ ಸ್ಪೋಟ ತುಮಕೂರು,ಮೇ 26, 2019 (..): ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿರುವುದರಿಂದ ಜೆಡಿಎಸ್‌ ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹೆಚ್‌.ಡಿ ದೇವೇಗೌಡರು ಸೋಲುವುದಕ್ಕೆ ಮೈತ್ರಿ ಕಾರಣ ಅಂತ ಅಂತ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್‌ ಅವರು ಹೇಳಿದ್ದಾರೆ. ತುಮಕೂರು ನಗರದ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್‌ ಕಾರ್ಯಕರ್ತ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಮೈತ್ರಿ ಇಲ್ಲದೇ ಹೋಗಿದ್ದಿದ್ದಾರೆ, ದೇವೇಗೌಡರು ೨ ಲಕ್ಷ ಮತಗಳಿಂದ ಗೆಲ್ಲುತ್ತಿದ್ದರು ಎಂದು ಹೇಳಿದ್ದಾರೆ.