ಬಿಜೆಪಿ ಅಭ್ಯರ್ಥಿಗಳಾದ ಡಿ.ವಿ ಸದಾನಂದಗೌಡ ತೇಜಸ್ವಿ ಸೂರ್ಯ ಗೆ ಭರ್ಜರಿ ಗೆಲುವು ಬೆಂಗಳೂರು,ಮೇ,23,2019(..): ಪ್ರಧಾನಿ ಮೋದಿ ಅವರ ಅಲೆಗೆ ಕಾಂಗ್ರೆಸ್ ನೆಲಕಚ್ಚಿದ್ದು ರಾಜ್ಯದಲ್ಲಿ 24 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನತ್ತ ಮುನ್ನುಗ್ಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಗೆಲುವು ಸಾಧಿಸಿದ್ದಾರೆ. ಹಾಗೆಯೇ ಬೆಂಗಳೂರು ಉತ್ತರದಲ್ಲಿ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಡಿ.ವಿ ಸದಾನಂದ ಗೌಡ ಗೆಲುವು ನಗೆ ಬೀರಿದ್ದಾರೆ. ಇನ್ನು ಚಿಂಚೋಳಿ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಜಯಭೇರಿ ಬಾರಿಸಿದ್ದಾರೆ. ಬೀದರ್ ನಲ್ಲಿ ಭಗವಂತ ಖೂಬಾ ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ. : #Election2019