ಕೊಡಲಿಯಿಂದ ಕೊಚ್ಚಿ ಪತ್ನಿ ಮತ್ತು ಮಗುವನ್ನ ಕೊಡಲಿಯಿಂದ ಹತ್ಯೆ ಮಾಡಿ ಆರೋಪಿ ಪತಿ ಪೊಲೀಸರಿಗೆ ಶರಣು ಗದಗ,ಮೇ,9,2019(..): ಪತಿಯೋರ್ವ ಕೊಡಲಿಯಿಂದ ಕೊಚ್ಚಿ ತನ್ನ ಪತ್ನಿ ಮಗುವನ್ನ ಹತ್ಯೆಗೈದಿರುವ ಘಟನೆ ಗದಗದಲ್ಲಿ ನಡೆದಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿನ ಗೋನಾಳದಲ್ಲಿ ಈ ಘಟನೆ ನಡೆದಿದೆ. ಪತ್ನಿ ನಿರ್ಮಲಾ(25), ಮಗು ನಂದೀಶ್(6) ಹತ್ಯೆಯಾದವರು . ಆರೋಪಿ ಪತಿ ರಮೇಶ್ ರಮೇಶ್ ಎಂಬಾತನೇ ತನ್ನ ಪತ್ನಿ ಮಗುವನ್ನ ಕೊಂದು ಪೊಲೀಸರಿಗೆ ಶರಣಾಗಿರುವ ಪತಿರಾಯ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : – –- - – –